Advertisement

ಸಾಧಿಸುವ ಛಲ ಬಂಟರಲ್ಲಿ ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

11:32 AM Aug 14, 2022 | Team Udayavani |

ಪುಣೆ: ಹೊರನಾಡಿನಲ್ಲಿರುವ ಕನ್ನಡಿಗರ ಬಗ್ಗೆ ನಮಗಿರುವ ಕಾಳಜಿ ಹಾಗೂ ನಿಮ್ಮಲ್ಲಿರುವ ಪ್ರೀತಿಯಿಂದಾಗಿ ಇಂದು ಪುಣೆ ಬಂಟರ ಸಂಘದ ಕಾರ್ಯಕ್ರಮದಲ್ಲಿ ಭಾಗವ ಹಿಸಲು ಆನಂದವಾಗುತ್ತಿದೆ. ಬಂಟ ಎನ್ನುವ ಹೆಸರಿನಲ್ಲಿಯೇ ಶಕ್ತಿಯಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೆ ಹೋಗಲಿ ಬಂಟರಿಗೆ ವಿಶೇಷ ಗೌರವ ಇದೆ. ಬಂಟರ ರಕ್ತದಲ್ಲಿ ಸಾಧಿಸುವ ಛಲವಿದೆ, ಒಗ್ಗಟ್ಟಿನ ಬಲವಿದೆ. ಬಂಟರು ಯಾವುದೇ ಊರಿಗೆ ತೆರಳಿದರೂ ಅಲ್ಲಿನ ಜನರ ಪ್ರೀತಿ, ವಿಶ್ವಾಸ ಗಳಿಸುವ ಸ್ನೇಹ ಭಾವ ಹೊಂದಿರುತ್ತಾರೆ. ಯಾರು ತಾನು ಹುಟ್ಟಿ ಬೆಳೆದ ಮಣ್ಣಿನ ಋಣ ನೆನಪಿಟ್ಟುಕೊಂಡು ಅದನ್ನು ತೀರಿಸುವ ಕೆಲಸ ಮಾಡುತ್ತಾರೋ ಅವರು ನಿಜವಾದ ಬಂಟರು. ಯಾವುದು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವ ಗುಣಬಂಟರಲ್ಲಿದೆ. ಪುಣೆಯಲ್ಲಿ ಕನ್ನಡಿಗರು ಬಹುಸಂಖ್ಯೆಯಲ್ಲಿದ್ದು, ಪುಣೆ ಬಂಟರ ಸಂಘದ ಮೂಲಕ ಕನ್ನಡಿಗರ ಪರಿಚಯವಾಗುತ್ತಿದೆ. ಪುಣೆ ಬಂಟರ ಸಂಘ ಮಾಡುತ್ತಿರುವ ಸಮಾಜಸೇವೆ, ನಾಡು – ನುಡಿ ಸೇವೆ ಅನನ್ಯವಾದುದು ಎಂದು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಪುಣೆ ಬಂಟರ ಸಂಘದ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಶೆಟ್ಟಿ ಸಮಾಜ ಕಲ್ಯಾಣ ಯೋಜನೆಯ ಶೈಕ್ಷಣಿಕ ನೆರವು ವಿತರಣೆ, ಸೇವಾ ಸಾಧಕ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಭವನದ 4ನೇ ವಾರ್ಷಿಕೋತ್ಸವವನ್ನು ಆ. 13ರಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನದ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ  ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿ ಗರ ಸಾಧನೆ ಅಗಾಧವಾದುದು. ಕನ್ನಡ ಹಾಗೂ ಮರಾಠಿ ಭಾಷಿಕರ ಸಂಬಂಧ ಅನ್ಯೋನ್ಯವಾಗಿದೆ. ದೇಶಭಕ್ತಿ ಹಾಗೂ ನಾಯ ಕತ್ವ ಬಂಟರಲ್ಲಿದೆ. ವಿಜಯಾ ಬ್ಯಾಂಕನ್ನು ಕಟ್ಟಿ ಬೆಳೆಸಿದವರು ಬಂಟ ಸಮಾಜವಾಗಿದೆ. ಜ್ಞಾನ ಪಸರಿಸುವಲ್ಲಿಯೂ ಬಂಟ ಸಮಾಜ ಮುಂದಿದ್ದು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪುಣೆ ಬಂಟರ ಸಂಘ ಇನ್ನಷ್ಟು ಪ್ರಗತಿ ಸಾಧಿಸುವಂತಾಗಲಿ. ಸರಕಾರದಿಂದ ಏನು ಸಾಧ್ಯವೂ ಅದನ್ನು ಪುಣೆ ಬಂಟರ ಸಂಘದ ಅಭಿವೃದ್ಧಿಗೆ ಖಂಡಿತಾ ನೀಡುತ್ತೇವೆ. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ದೇಶದೆಲ್ಲೆಡೆ ಆಚರಣೆ ನಡೆಯುತ್ತಿದೆ. ಸಮೃದ್ಧ, ಸಶಕ್ತ ದೇಶ ಕಟ್ಟುವಲ್ಲಿ ನಿಮ್ಮೆಲ್ಲರ ಸಹಕಾರ ಸದಾಯಿರಲಿ ಎಂದರು.

ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ ಬೆಟ್ಟು ಬಾಳಿಕೆ ಸಂತೋಷ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ. ಟಿ. ರವಿ, ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್‌ ರತ್ನಾಕರ್‌ ಹೆಗ್ಡೆ, ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್‌ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮಾತೃಭೂಮಿ ಕೋ – ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿ. ನ ಕಾರ್ಯದರ್ಶಿ ಪ್ರವೀಣ್‌ ಭೋಜ ಶೆಟ್ಟಿ, ಇಂಟರ್‌ನ್ಯಾಶನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ ಮಂಗಳೂರು ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಪ್ರಾಯೋಜಕರಾದ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯಂತ್‌ ಶೆಟ್ಟಿ, ಉದ್ಯಮಿಗಳಾದ ದಯಾಶಂಕರ್‌ ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಜಿತೇಂದ್ರ ಹೆಗ್ಡೆ, ಖ್ಯಾತ ಕ್ಯಾಟರಿಂಗ್‌ ಉದ್ಯಮಿ ಹಾಗೂ ಸಮಾಜ ಸೇವಕ ಕೆ. ಕೆ. ಶೆಟ್ಟಿ ಅಹ್ಮದ್‌ನಗರ, ಸಂಘದ ಉಪಾಧ್ಯಕ್ಷರಾದ ವೈ. ಚಂದ್ರಹಾಸ ಶೆಟ್ಟಿ, ಪ್ರವೀಣ್‌ ಶೆಟ್ಟಿ  ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ,ಯುವ ಕಾರ್ಯಾಧ್ಯಕ್ಷ ಉದಯ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾ ಧ್ಯಕ್ಷ ಶೇಖರ್‌ ಸಿ. ಶೆಟ್ಟಿ  ಉಪಸ್ಥಿತರಿದ್ದರು.

ಬೊಮ್ಮಾಯಿ ದಂಪತಿಗೆ ಸಮ್ಮಾನ :

ಮುಖ್ಯಮಂತ್ರಿ ಬೊಮ್ಮಾಯಿ ದಂಪತಿ ಯನ್ನು ಪುಣೆ ಬಂಟರ ಸಂಘದ ಪರವಾಗಿ ಬೃಹತ್‌ ಹಾರ, ಪಂಢರಾಪುರದ ವಿಟ್ಠಲನ ಮೂರ್ತಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಅತಿಥಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಉದ್ಯಮಿ ಹಾಗೂ ಸಮಾಜ ಸೇವಕರಾದ ಸದಾಶಿವ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ಅಂತಾರಾಷ್ಟ್ರೀಯ ಮಹಿಳಾ ಸಮಾಜ ಸೇವಕಿ ಪುಷ್ಪಾ ಕುಶಲ್‌ ಹೆಗ್ಡೆ, ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ, ಅರ್ಜುನ್‌ ಪ್ರಶಸ್ತಿ ಪುರಸ್ಕೃತ ಬ್ಯಾಡ್ಮಿಂಟನ್‌ ತಾರೆ ಚಿರಾಗ್‌ ಶೆಟ್ಟಿ ಅವರನ್ನು ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.

Advertisement

ಸಭಾ ಕಾರ್ಯಕ್ರಮವನ್ನು ನಿತೇಶ್‌ ಎಕ್ಕಾರ್‌, ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಕ್ಷತಾ ಸುಜಿತ್‌ ಶೆಟ್ಟಿ ಹಾಗೂ ಕರ್ನೂರು ಮೋಹನ್‌ ರೈ ನಿರೂಪಿಸಿದರು.

ಸಂತೋಷ್‌ ಶೆಟ್ಟಿ ಅವರಿಗೆ  “ಬಂಟ ಸೇನಾಧಿಪತಿ’ ಬಿರುದು :

ಪುಣೆ ಬಂಟರ ಸಂಘದ ಅಧ್ಯಕ್ಷ, ಸಂಘದ ಹತ್ತು ಹಲವು ಯೋಜನೆಗಳ ಕತೃì, ಬಂಟರ ಭವನದ ರೂವಾರಿ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಬಾಳಿಕೆ ಅವರನ್ನು ಸಂಘಕ್ಕೆ ಹಾಗೂ ಸಮಾಜಕ್ಕೆ ಸಲ್ಲಿಸಿದ ವಿಶೇಷ ಸೇವೆಗಾಗಿ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರ ಪರವಾಗಿ  “ಬಂಟ ಸೇನಾಧಿಪತಿ’ ಬಿರುದನ್ನು ನೀಡಿ ಸಿಎಂ ಬೊಮ್ಮಾಯಿ ಹಾಗೂ ಅತಿಥಿಗಳು ಸಮ್ಮಾನಿಸಿದರು.

ಸಾಧಕರ ಪ್ರತಿಮೆ ಅನಾವರಣ :

ಪುಣೆ ಬಂಟರ ಸಂಘದ ಬೆನ್ನೆಲುಬು ದಿ| ಜಗನ್ನಾಥ ಶೆಟ್ಟಿ ಹಾಗೂ ದಿ| ಗುಂಡೂರಾಜ್‌ ಶೆಟ್ಟಿಯವರ ಪ್ರತಿಮೆಗಳನ್ನು ಸಿಎಂ ಬೊಮ್ಮಾಯಿ ಅವರು ಅನಾವರಣಗೊಳಿಸಿದರು. ಸಂಘದ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್‌ ಶೆಟ್ಟಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯಂತ್‌ ಶೆಟ್ಟಿ, ಉದ್ಯಮಿಗಳಾದ ದಯಾಶಂಕರ್‌ ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಜಿತೇಂದ್ರ ಹೆಗ್ಡೆ, ಖ್ಯಾತ ಕ್ಯಾಟರಿಂಗ್‌ ಉದ್ಯಮಿ ಹಾಗೂ ಸಮಾಜ ಸೇವಕ ಕೆ. ಕೆ. ಶೆಟ್ಟಿ ಅಹ್ಮದ್‌ನಗರ ದಂಪತಿಗಳನ್ನು ಗೌರವಿಸಲಾಯಿತು. ಪುಣೆ ಬಂಟರ ಸಂಘದ ಕನಸಿನ ಯೋಜನೆ ಕಲ್ಪವೃಕ್ಷ ಶೈಕ್ಷಣಿಕ ಸಂಸ್ಥೆಗಳ ನೀಲನಕ್ಷೆ ಬಿಡುಗಡೆಗೊಳಿಸಲಾಯಿತು.

ಧ್ವಜಾರೋಹಣ :

ಭವನದ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಿಎಂ ಬೊಮ್ಮಾಯಿ ಅವರು ಹಾರಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಆರತಿ ಶಶಿಕಿರಣ್‌ ಶೆಟ್ಟಿ ಚಾವಡಿಯಲ್ಲಿ ದೇವರ ಮಂಟಪಕ್ಕೆ ಆರತಿ ಬೆಳಗಿ ಪ್ರಾರ್ಥಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಮಿತಾ ಜತ್ತನ್‌ ಮತ್ತು ಅಮಿತಾ ಕಲಾವೃಂದ ಮೀರಾರೋಡ್‌ ಕಲಾವಿದರಿಂದ ಹಾಗೂ ಸಂಘದ ಮಹಿಳಾ ವಿಭಾಗದಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next