Advertisement

ಪುಂಡಿ ಪಣವು ಹಾಡು ರೆಡಿ

12:38 PM Oct 25, 2018 | |

ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನ, ರಾಮಕೃಷ್ಣ ಶೆಟ್ಟಿ ನಿರ್ಮಾಣದ ‘ಪುಂಡಿ ಪಣವು’ ಚಿತ್ರದ ಧ್ವನಿ ಸುರುಳಿ ಮತ್ತು ಟ್ರೇಲರ್‌ ರಿಲೀಸ್‌ ಶೀಘ್ರ ದಲ್ಲೇ ನಡೆ ಯ ಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಆರ್‌.ಎಸ್‌. ಕಳವಾರ್‌, ಸುರೇಶ್‌ ದೇವಾಡಿಗ ಸಾಹಿತ್ಯಕ್ಕೆ ಭಾಸ್ಕರ್‌ ರಾವ್‌ ಸ್ವರ ಸಂಯೋಜನೆಯಲ್ಲಿ ಗುರು ರಾವ್‌ ಸುರತ್ಕಲ್‌, ಅರುಣಾ ರಾವ್‌ ಕಟೀಲ್‌, ಭಾಸ್ಕರ್‌ ರಾವ್‌ ಬಿ.ಸಿ.ರೋಡ್‌, ವಿಜಯ ಭಾಸ್ಕರ್‌, ಟಿ.ವಿ. ಗಿರಿ ಮುಡಿಪು ಕಂಠದಾನ ಮಾಡಿದ್ದಾರೆ.

Advertisement

ಅಪ್ಪಟ ತುಳು ಭಾಷೆಯ ಕಂಪಿನೊಂದಿಗೆ ‘ನೇಮೊದ ಬೂಳ್ಯ’ ಚಿತ್ರ ಮಾಡುವ ಮೂಲಕ ಶಹಬ್ಟಾಸ್‌ ಗಿರಿ ಪಡೆದಿದ್ದ ನಿರ್ದೇಶಕ ಗಂಗಾಧರ ಕಿರೋಡಿಯನ್‌ ಅವರ ಎರಡನೇ ಚಿತ್ರವಿದು. ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ‘ಧರ್ಮೆತ್ತಿ ಮಣ್ಣ್’ ಧಾರಾವಾಹಿ ‘ಪುಂಡಿ ಪಣವು’ ಆಗಿ ಮೂಡಿಬರಲಿದೆ. ನಾಯಕನಾಗಿ ಹೊಸ ಪ್ರತಿಭೆ ಸೂರಜ್‌ ಸನಿಲ್‌, ನಾಯಕಿಯಾಗಿ ಸುವರ್ಣ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಗೋಪಿನಾಥ್‌ ಭಟ್‌, ರಘುರಾಮ್‌ ಶೆಟ್ಟಿ ತಾರಾಗಣದಲ್ಲಿದ್ದಾರೆ. ಪ್ರತಾಪ್‌ ಸಾಲ್ಯಾನ್‌ ಕದ್ರಿ ಸಹ ನಿರ್ದೇಶಕರು. ಉಮಾಪತಿ ಛಾಯಾಗ್ರಹಣ. ಕತೆ, ಚಿತ್ರಕತೆ, ಸಂಭಾಷಣೆ ಗಂಗಾಧರ ಕಿರೋಡಿಯನ್‌ ಅವರದ್ದೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next