Advertisement

ರಾಜ್ಯಕ್ಕೆ ದ್ವಿತೀಯ ಸ್ಥಾನಿ ಶ್ರೀಯಾ ಶೆಣೈ

03:54 AM Apr 16, 2019 | Sriram |

ಮಂಗಳೂರು: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿರುವ ಕೊಡಿಯಾಲ್‌ಬೈಲ್‌ ಕೆನರಾ ಪ.ಪೂ. ಕಾಲೇಜಿನ ಶ್ರೀಯಾ ಶೆಣೈ ಅವರಿಗೆ ಮುಂದೆ ಸಿಎ ಅಧ್ಯಯನ ಮಾಡಬೇಕೆಂಬ ಇರಾದೆಯಂತೆ.

Advertisement

“ಉತ್ತಮ ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದೀಗ ರಾಜ್ಯಕ್ಕೇ ಎರಡನೇ ಸ್ಥಾನ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ಉಪನ್ಯಾಸಕರು ಮತ್ತು ಹೆತ್ತವರ ನಿರಂತರ ಪ್ರೋತ್ಸಾಹದಿಂದ ಅಂಕ ಗಳಿಸಲು ಸಾಧ್ಯವಾಯಿತು’ ಎಂದು “ಉದಯವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು ಶ್ರೀಯಾ.

ಉದ್ಯಮಿ ಬಿಕರ್ನಕಟ್ಟೆಯ ಪಿ. ಗಣೇಶ್‌ ಶೆಣೈ ಮತ್ತು ಗೃಹಿಣಿ ಶಾಲಿನಿ ಶೆಣೈ ದಂಪತಿಯ ಇಬ್ಬರು ಮಕ್ಕಳಲ್ಲಿ ಶ್ರೀಯಾ ಮೊದಲಿನವರು. ಸಹೋದರ ಸೋಮ್‌ ಪ್ರಸಾದ್‌ ಎಂಟನೇ ತರಗತಿ ಓದುತ್ತಿದ್ದಾರೆ. ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿರುವ ಶ್ರೀಯಾ ಬೆಳಗ್ಗಿನ ಅವಧಿಯಲ್ಲಿ ಓದುತ್ತಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next