Advertisement

ಪಿಎಸ್‌ಐ ಪ್ರಕರಣ: ಪ್ರಥಮ ರ್‍ಯಾಂಕ್‌ ಪಡೆದಿದ್ದ ಅಭ್ಯರ್ಥಿ ವಶಕ್ಕೆ

10:16 PM Jun 09, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು  ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿರುವ ಜೆ.ಕುಶಾಲ್‌ ಕುಮಾರ್‌ನನ್ನು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಪ್ಪೆಸಗಿರುವುದು  ವಿಚಾರಣೆಯಲ್ಲಿ  ಕಂಡು ಬಂದರೆ ಬಂಧಿಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

Advertisement

ಆರೋಪಿ 80 ಲಕ್ಷ ರೂ. ನೀಡಿ ಅಕ್ರಮ ಎಸಗಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದುಕೊಂಡಿದ್ದಾನೆ. ಆರೋಪಿಗಳ ಒಎಂಆರ್‌ ಶೀಟ್‌ನಲ್ಲಿ ಕೆಲವು ಉತ್ತರಗಳನ್ನು ಮಾತ್ರ ತುಂಬಿ, ಉಳಿದ ಉತ್ತರಗಳನ್ನು  ಖಾಲಿ ಬಿಟ್ಟಿದ್ದರು. ಅಲ್ಲದೆ, ಒಎಂಆರ್‌ ಶೀಟ್‌ನಲ್ಲಿ “ಪ್ರಯತ್ನಿಸಿದ ಪ್ರಶ್ನೆಗಳು’ ಎಂಬ ಕಾಲಂನಲ್ಲಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next