Advertisement

ಪರ್ರಿಕರ್‌ ಚಿತಾಭಸ್ಮ ಕಾಳಿ ನದಿಯಲ್ಲಿ ವಿಸರ್ಜನೆ

06:59 AM Mar 28, 2019 | Team Udayavani |

ಕಾರವಾರ: ಗೋವಾದ ಮಾಜಿ ಸಿಎಂ ದಿ. ಮನೋಹರ ಪರ್ರೀಕರ್‌ ಅವರ ಚಿತಾಭಸ್ಮವನ್ನು ಕಾರವಾರ ನಗರದಲ್ಲಿ ಬುಧವಾರ ಸಂಜೆ ಮೆರವಣಿಗೆ ನಡೆಸಿ ಇಲ್ಲಿನ ಕಾಳಿ ಸಂಗಮದಲ್ಲಿ ವಿಸರ್ಜಿಸಲಾಯಿತು.

Advertisement

ನಗರದ ಕಾರವಾರ-ಕೋಡಿಬಾಗ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿದ ಬಿಜೆಪಿ ಕಾರ್ಯಕರ್ತರು ಮನೋಹರ ಪರ್ರಿಕರ್‌ ಅಮರ್‌ ರಹೇ ಎಂಬ ಘೋಷಣೆ
ಕೂಗಿದರು. ನಗರದ ಗ್ರೀನ್‌ ಸ್ಟ್ರೀಟ್‌ನಲ್ಲಿರುವ ಬಿಜೆಪಿ ಕಚೇರಿ ಎದುರಿನಿಂದ ಪರ್ರಿಕರ್‌ ಭಾವಚಿತ್ರ ಹಾಗೂ ಚಿತಾಭಸ್ಮ ಹೊತ್ತ ವಾಹನವು ಕೋಡಿಬಾಗದ ಕಾಳಿ ರಿವರ್‌ ಗಾರ್ಡನ್‌ವರೆಗೆ ಸಾಗಿತು. ಬಳಿಕ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ದೋಣಿಯೊಂದರಲ್ಲಿ ತೆರಳಿ ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸಂಗಮಿಸುವ ಸ್ಥಳದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next