Advertisement

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಬವಣೆ

06:08 PM Jun 16, 2022 | Team Udayavani |

ಹೊಳೆನರಸೀಪುರ: ಜಿಲ್ಲೆಯ ಬಹುತೇಕ ತಾಲೂಕು ಕೇಂದ್ರ ಸೇರಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಕುಡಿಯುವ ನೀರಿಗೆ ಹಾಹಾ ಕಾರ ಅನುಭವಿಸಬಾರದೆಂದು ಶುದ್ಧ ನೀರು ಘಟಕ ಆರಂಭಿಸಿ ಸರ್ಕಾರ ಶುದ್ಧ ಕುಡಿಯುವ ನೀರಿನ ಕೇಂದ್ರಗಳನ್ನು ಆರಂಭಿಸಿದೆ.

Advertisement

ಅದರಂತೆ ಪಟ್ಟಣದಲ್ಲಿಯೂ ಸಹ ಮೈಸೂರು ರಸ್ತೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಗೊಂಡು ವರ್ಷಗಳೆ ಕಳೆದು ಹೋಗಿದೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗೆ ಲಭ್ಯ ವಾಗದೆ ಇರುವುದು ವಿಪರ್ಯಾಸದ ಸಂಗತಿ ಆಗಿದೆ.

ಕೊಟ್ಟ ಮಾತು ತಪ್ಪಿದ್ರಾ ಶಾಸಕ ರೇವಣ್ಣ?: ಕಳದೆ ಎರಡು ವರ್ಷಗಳ ಹಿಂದೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಗ್ರಾಮಗಳಲ್ಲಿ ಶಾಸಕ ರೇವಣ್ಣ ಅವರು ಶುದ್ಧಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಕುಡಿಯುವ ನೀರಿನ ಸಂಕಷ್ಟ ಪರಿಹರಿಸಿದ್ದರು. ಅದರಂತೆ, ಪಟ್ಟಣದಲ್ಲಿಯೂ ಸಹ ಪುರಸಭೆ ವತಿ ಯಿಂದ ಪಟ್ಟಣದ ವ್ಯಾಪ್ತಿಯಲ್ಲಿ ಹನ್ನೆರಡು ಘಟಕ ಆರಂ ಭಿಸುವುದಾಗಿ ತಿಳಿಸಿ, ಒಂದೆರಡು ಕಡೆ ಕಾಮಗಾರಿ ಸಹ ನಡೆದಿತ್ತು. ಇದರಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಅವರು ಈ ಶುದ್ಧ ನೀರು ಘಟಕಕ್ಕೆ ಶಂಕುಸ್ಥಾಪನೆ ನೇರವೇರಿಸಿ ದ್ದರು.ಶಂಕುಸ್ಥಾಪನೆ ನೇರವೇರಿಸಿ ಕೆಲವೇ ದಿನಗಳಲ್ಲಿ ಆರಂಭಗೊಂಡಿದ್ದ ಶೆಡ್‌ ಏಕಾಏಕಿ ತೆರವುಗೊಳಿಸಲಾಯಿತು.

ಶುದ್ಧ ನೀರು ಅಲಭ್ಯ: ಪ್ರಸ್ತುತ ಪಟ್ಟಣದ ಸಮೀಪದಲ್ಲೆ ಹರಿದು ಹೋಗುತ್ತಿರುವ ನದಿಯಿದ್ದರೂ ಸಹ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವುದರಿಂದ ಬಹುತೇಕ ಬಡಾವಣೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿದೆ.

ನೀರು ಸರಬರಾಜು ವ್ಯವಸ್ಥೆ ಇಲ್ಲ: ಇತ್ತೀಚಿನ ದಿನಗಳಲ್ಲಿ ಪಟ್ಟಣದ ಪುರಸಭೆ ಬಹಳಷ್ಟು ಸಮಸ್ಯೆಗಳಲ್ಲಿ ಸಿಲುಕಿದೆ. ಅವುಗಳಲ್ಲಿ ಕುಡಿ ಯುವ ನೀರಿನ ಸಮಸ್ಯೆಯೂ ಸಹ ಅಡಗಿದೆ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕುಡಿಯುವ ನೀರು ಸರಬರಾಜು ಇಲ್ಲದೆ, ಆಲ್ಲಿನ ಜನತೆ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇಂತಹ ಶುದ್ಧ ಕುಡಿಯುವ ನೀರಿನ ಘಟಕಗಳು ಪಟ್ಟಣದ ಬಡಾವಣೆಗಳಲ್ಲಿ ಪುರಸಭೆ ಆರಂಬಿಸಿದ್ದೇ ಆದಲ್ಲಿ ಅಲ್ಲಿನ ಜನರಿಗೆ ತಾತ್ಕಾಲಿಕವಾಗಿಯಾದರೂ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

Advertisement

ಪ್ರಚಾರ ಸಾಕು, ನೀರು ಬೇಕು: ಜೊತೆಗೆ ಮೈಸೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಶುದ್ಧ ನೀರಿನ ಘಟಕ ಮುಂಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಅವರ ಭಾವಚಿತ್ರಗಳನ್ನು ಪುರಸಭೆ ಹಾಕಿದೆ. ಅದರಂತೆ ಪಟ್ಟಣದಲ್ಲಿ ಉಳಿದಿ ರುವ ಶುದ್ಧ ನೀರು ಘಟಕಗಳನ್ನು ನಿರ್ಮಿಸಿ ಪಟ್ಟಣದಲ್ಲಿನ ಕುಡಿಯುವ ನೀರಿನ ಹಾಹಾಕಾರವನ್ನು ತಪ್ಪಿಸುವಲ್ಲಿ
ಮತ್ತು ಜನ ಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬಾರದಂತೆ ಪುರಸಭೆ ಕ್ರಮಕೈಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದೆ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ಪುರಸಭೆ ಅಧ್ಯಕ್ಷೆ ಸುದಾನಳಿನಿ ಅವರು ಇಚ್ಛಾಶಕ್ತಿ ಪ್ರದರ್ಶಿಸಿ ಶೀಘ್ರವಾಗಿ ನಿಮಾ ìಣಕ್ಕೆ ಚಾಲನೆ ನೀಡುವರೆ ಎಂಬುದನ್ನು ಕಾದು ನೋಡ ಬೇಕಿದೆ.

ಪಟ್ಟಣದ ಮೈಸೂರು ರಸ್ತೆಯಲ್ಲಿನ ಶುದ್ಧನೀರು ಘಟಕದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿದೆ. ಆದರೆ ಈ ಶುದ್ಧ ನೀರು ಘಟಕಕ್ಕೆ ನೀರಿನ ಸಂಪರ್ಕಕ್ಕೆ ಕೊಳವೆ ( ಬೋರ್‌ವೆಲ್‌) ತೆಗೆಸುವಲ್ಲಿ ತಡವಾಗಿದೆ. ಈ ಬೋರ್‌ವೆಲ್‌ ಕಳೆದ ವಾರವಷ್ಟೇ ಕೊರೆಸಲಾಗಿದ್ದು, ಭಾಗಶಃ ಕುಡಿಯುವ ನೀರಿನ ಯಂತ್ರ ಅಳವಡಿಕೆ ಒಂದೆರಡು ವಾರಗಳಲ್ಲಿ ಪೂರ್ಣಗೊಂಡು ಉದ್ಘಾ ಟನೆ ಆಗಲಿದೆ. ಪಟ್ಟಣದ ವ್ಯಾಪ್ತಿಯಲ್ಲಿ 12 ಶುದ್ಧ ನೀರು ಘಟಕ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಇದರಲ್ಲಿ ಎರಡು ಮಾತ್ರ ಪುರಸಭೆಯಿಂದ ಉಳಿದವುಗಳು ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಿಸುವ ಯೋಜನೆ ಇದೆ.
●ಶಾಂತಲಾ, ಪುರಸಭೆ ಮುಖ್ಯಾಧಿಕಾರಿ

ಈ ಶುದ್ದ ನೀರು ಘಟಕ ಕಾಮಗಾರಿ ಪೂರ್ಣಗೊಂಡು ವರ್ಷಗಳೆ ಕಳೆದಿದೆ. ಆದರೆ ಇದಕ್ಕೆ ಬೇಕಾದ ಸವಲತ್ತುಗಳ ಅಳವ ಡಿಕೆಯಲ್ಲಿ ಭಾರಿ ನಿಧಾನಗತಿಯಿಂದ ನಡೆದಿದ್ದು ತಾವು ಈ ಬಗ್ಗೆ ಕ್ರಮಕೈಗೊಂಡಿದ್ದು, ಒಂದೆರಡು ವಾರಗಳಲ್ಲಿ ಸಾರ್ವಜನಿಕರಿಗೆ ಲಭಿಸಲಿದೆ.
ಜಿ.ಕೆ.ಸುಧಾನಳಿನಿ, ಪುರಸಭೆ ಅಧ್ಯಕ್ಷ

ಈ ಶುದ್ಧ ನೀರು ಘಟಕ ನಿರ್ಮಾಣ ಕಾರ್ಯ ತ್ವರಿತಗತಿಯಿಂದ ಮಾಡಬೇಕಿತ್ತು. ಆದರೆ ಪುರಸಭೆ ಆಮೆಗತಿ ಅನುಸರಿಸಿದೆ. ಇದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎಂದು ಹೇಳಬಹುದಾಗಿದೆ.
●ರಾಘವೇಂದ್ರ,
ಪುರಸಭೆ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ

●ಎನ್‌.ಎಸ್‌.ರಾಧಾಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next