Advertisement
ಶನಿವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನಿಂದ ಹೊರಬಂದ ವಿದ್ಯಾರ್ಥಿ ಗಳು ಪಿರಿಯಾಪಟ್ಟಣ – ಬೆಟ್ಟದಪುರ ಹಾಸನ ಮುಖ್ಯ ರಸ್ತೆಯನ್ನು ಸುತ್ತು ವರಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಡ್ಡಗಟ್ಟಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
Related Articles
Advertisement
ಸುದ್ದಿ ತಿಳಿದ ಕೂಡಲೇ ಡಿಪೋ ವ್ಯವ ಸ್ಥಾಪಕ ದರ್ಶನ್ ಮತ್ತು ಮೈಮುಲ್ ನಿರ್ದೇಶಕ ಪಿ.ಎಂ. ಪ್ರಸನ್ನ ಧಾವಿಸಿ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.
ಬೇಡಿಕೆ: ಬಳಿಕ ಮಾತನಾಡಿದ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಕಾಲೇಜು ಬಳಿ ಕೋರಿಕೆ ನಿಲುಗಡೆ ಫಲಕ ಅಳವಡಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವ ಪ್ರತಿ ಬಸ್ ಹಾಗೂ ಈ ಮಾರ್ಗದಲ್ಲಿರುವ ಡಿಪೋಗೆ ತೆರಳುವ ಮತ್ತು ಡಿಪೋದಿಂದ ಬಸ್ ನಿಲ್ದಾಣಕ್ಕೆ ಬರುವ ಬಸ್ಗಳು ಕಾಲೇಜು ಬಳಿ ಕಡ್ಡಾಯ ನಿಲುಗಡೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲು ಡಿಪೋ ವ್ಯವಸ್ಥಾಪಕ ದರ್ಶನ್ಗೆ ತಿಳಿಸಿದರು.
ಭರವಸೆ: ಕಾಲೇಜು ಬಳಿ ಇರುವ ಎರಡು ಬಸ್ ತಂಗುದಾಣಗಳು ಅಶು ಚಿತ್ವದಿಂದ ಕೂಡಿದ್ದು, ಕೂಡಲೆ ಸ್ವಚ್ಛಗೊಳಿ ಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ದೇವರಾಜ್ ಅವರಿಗೆ ಸೂಚಿಸಿದರು. ಡಿಪೋ ವ್ಯವಸ್ಥಾಪಕರು ಬಸ್ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಹದೇವ್, ಡಾ. ಮಂಜುನಾಥ್, ಯಶಸ್ವಿನಿ ಸೇರಿದಂತೆ ಮತ್ತಿತರರು ಹಾಜರಿದ್ದರು.