Advertisement

ಅಲ್ಪ ಸಂಖ್ಯಾತರ ಶೋಷಣೆಗೆ ಖಂಡನೆ

03:20 PM Dec 03, 2021 | Team Udayavani |

ಜೇವರ್ಗಿ: ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ ಹಾಗೂ ಸಂವಿಧಾನ ಬದ್ಧ ರಕ್ಷಣೆ ನೀಡಲು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಗುರುವಾರ ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಸಿಪಿಐ ತಾಲೂಕು ಕಾರ್ಯದರ್ಶಿ ಸುಭಾಷ ಹೊಸಮನಿ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಮತ್ತು ಅವುಗಳನ್ನು ಪ್ರಚೋದಿಸುವ ಕೆಲಸ ಮುಂದುವರೆಸಿದೆ. ನಿಜವೆಂದು ಬಿಂಬಿಸುವ ಮೂಲಕ ಕಾನೂನುಗಳನ್ನು ಕೈಗೆತ್ತಿಕೊಂಡು ದಾಳಿ ನಡೆಸುವ ದುಷ್ಕೃತ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ಮುಖಂಡರಾದ ವೆಂಕೋಬರಾವ್‌ ವಾಗಣಗೇರಿ, ಪರಶುರಾಮ ಬಡಿಗೇರ, ಸಿದ್ಧರಾಮ ಹರವಾಳ, ಮಹಾದೇವ ದೊಡ್ಡಮನಿ, ಮಲಕಪ್ಪ ಹರನೂರ, ಮಹಾದೇವ ಕೆಲ್ಲೂರ, ಸಿದ್ದಣಗೌಡ ಕೂಡಿ, ಚಂದಮ್ಮ ಸೊನ್ನ, ಪಾರ್ವತಿ ಕೆಲ್ಲೂರ ಸೇರಿದಂತೆ ಹಲವಾರು ಜನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next