Advertisement

ತಲೇಖಾನ ಗ್ರಾಪಂಗೆ ಬೀಗ ಜಡಿದ ಕೂಲಿಕಾರ್ಮಿಕರು

06:05 PM Jun 22, 2022 | Team Udayavani |

ಮುದಗಲ್ಲ: ಪಟ್ಟಣ ಸಮೀಪದ ತಲೇಖಾನ ಗ್ರಾಪಂ ಕಾರ್ಯಾಲಯಕ್ಕೆ ಸೋಮವಾರ ಬೀಗ ಜಡಿದ ತಲೇಖಾನ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ತಲೇಖಾನ ಗ್ರಾಮದ ಕೂಲಿ ಕಾರ್ಮಿಕರಿಗೆ ಖಾತ್ರಿ ಯೋಜನೆಯಡಿ ಕೆರೆ ನಿರ್ಮಾಣದ ಕೆಲಸ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ನರೇಗಾ ಕಿರಿಯ ಅಭಿಯಂತರಿಗೆ ಕಳೆದ ಬಾರಿ 7 ದಿನದ ಕೆಲಸಕ್ಕೆ ಬರಿ 900 ರೂ. ಕೂಲಿ ಪಾವತಿಸಲಾಗಿದೆ. ಈ ಬಾರಿಯೂ ಹಾಗೆ ಮಾಡಂತೆ ಮನವಿ ಮಾಡಿದ್ದ ವಿಚಾರವಾಗಿ ಜೆಇ ಸೋಮಶೇಖರ ಮತ್ತು ಕೂಲಿಕಾರ್ಮಿಕರ ಮಧ್ಯೆ ವಿವಾದ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೇರಿದ ಕಾರಣ ಕೂಲಿಕಾರರು ಕಳೆದ ಮೂರು ದಿನಗಳಿಂದ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಂಗಳವಾರ ಗ್ರಾಪಂ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಗ್ರಾಪಂ ಹೊರಗಡೆಯೇ ಕುಳಿತು ಮನೆಗೆ ಹಿಂದಿರುಗಿದ ಪ್ರಸಂಗ ನಡೆದಿದೆ. ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ-ಸದಸ್ಯರು ಕೂಲಿ ಕಾರ್ಮಿಕರೊಂದಿಗೆ ಮಂಗಳವಾರ ನಡೆಸಿದ ಸಂಧಾನ ವಿಫಲವಾಗಿದೆ. ಖಾತ್ರಿ ಯೋಜನೆಯ ಕಿರಿಯ ಅಭಿಯಂತರ ಸೋಮಶೇಖರ ಸ್ಥಳಕ್ಕೆ ಬಂದು ಕ್ಷಮೆ ಕೆಳುವರೆಗೂ ಗ್ರಾಪಂಗೆ ಹಾಕಿದ ಬೀಗ ತೆರವುಗೊಳಿಸುವದಿಲ್ಲ ಎಂದು ಕೂಲಿ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next