Advertisement

ಸಮಸ್ಯೆ ಶೀಘ್ರ ಸರಿಪಡಿಸದಿದ್ದರೆ ಜೆಸ್ಕಾಂ ಕಚೇರಿ ಎದುರು ಧರಣಿ

02:39 PM Jul 04, 2022 | Team Udayavani |

ನಾರಾಯಣಪುರ: ಕೊಡೇಕಲ್‌ಗೆ ಪ್ರತ್ಯೇಕ ಫೀಡರ್‌ ಹಾಗೂ ಹೋಬಳಿ ವಲಯದ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ಸೌಕರ್ಯ ಒದಗಿಸದಿದ್ದರೆ ಜು.20ರಿಂದ ಕರವೇ (ಪ್ರವೀಣ ಶೆಟ್ಟಿ ಬಣ)ವತಿಯಿಂದ ಕೊಡೇಕಲ್‌ ಜೆಸ್ಕಾಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹುಣಸಗಿ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ ನೀಡಿದರು.

Advertisement

ಕೊಡೇಕಲ್‌ ಪಟ್ಟಣದ ಪಿಎಸೈ ಅವರಿಗೆ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿ ಮಾತನಾಡಿ ಅವರು, ಪಟ್ಟಣಕ್ಕೆ ಸರಬರಾಜು ಮಾಡುವ ವಿದ್ಯುತ್‌ ಲೈನ್‌ ಪ್ರತ್ಯೇಕ ಮಾಡಿ ಮತ್ತು ವಲಯದ ವಿವಿಧ ಹಳ್ಳಿಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ಸಂಪರ್ಕ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಇದುವರೆಗೂ ಪ್ರತ್ಯೇಕ ಫೀಡರ್‌ ಬೆಡ್‌ ಸ್ಥಾಪಿಸಿಲ್ಲ. ಜು.20ರೊಳಗೆ ಫೀಡರ್‌ ಸ್ಥಾಪಿಸಬೇಕು ಮತ್ತು ನಿರಂತರ ಜ್ಯೋತಿ ಸೌಕರ್ಯ ಒದಗಿಸದಿದ್ದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಪಿಎಸೈ ಶ್ರೀಶೈಲ ಅಂಬಾಟೆ ಮನವಿ ಸ್ವೀಕರಿಸಿ ಮಾತನಾಡಿ, ನಾನು ಜೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತನಾಡಿ ಜು.20ರೊಳಗೆ ಎಲ್ಲ ಸರಪಡಿಸುವಂತೆ ಹೇಳುವುದಾಗಿ ಭರವಸೆ ನೀಡಿದರು.

ಶಿವರಾಜ ಹೊಕ್ರಾಣಿ, ಕಾಂತು ಗುತ್ತೆದಾರ, ರಮೇಶ ಪೂಜಾರಿ, ಅಮರೇಶ ನೂಲಿ, ಬಸವರಾಜ ದೊಡಮನಿ, ಅಂಬ್ರೇಶ ಅಗ್ನಿ, ಶಂಕರಗೌಡ ಮಾಲಿಪಾಟೀಲ, ರಮೇಶ ಅಂಬಿಗೇರ, ಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next