Advertisement

ನಾಮಪತ್ರ ಸಲ್ಲಿಸದೇ ಗ್ರಾಪಂ ಮುಂದೆ ಪ್ರತಿಭಟನೆ

05:19 PM Dec 12, 2020 | Suhan S |

ಸಕಲೇಶಪುರ: ಕಸ್ತೂರಿ ರಂಗನ್‌ ವರದಿ ವ್ಯಾಪ್ತಿಗೆ ಬರುವ ತಾಲೂಕಿನ ಹೆತ್ತೂರು ಹೋಬಳಿಯ ಹೆತ್ತೂರು, ಹೊಂಗಡಹಳ್ಳ,ಕಸಬಾ ಹೋಬಳಿಯ ಹೆಗ್ಗದ್ದೆ ಗ್ರಾಪಂಗೆ ಚುನಾವಣೆ ನಡೆಯುತ್ತಿದ್ದು, ಕೊನೆಯ ದಿನವಾಗಿದ್ದ ಶುಕ್ರವಾರ ನಾಮಪತ್ರ ಸಲ್ಲಿಸದೇ, ಗ್ರಾಮಸ್ಥರು ಹಾಗೂ ಸ್ಪರ್ಧಾಕಾಂಕ್ಷಿಗಳು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಸ್ತೂರಿ ರಂಗನ್‌ ವರದಿಯಿಂದ ಹೆಚ್ಚು ಬಾಧಿತವಾಗುವ ಹೊಂಗಡಹಳ್ಳ, ಹೆತ್ತೂರು, ಹೆಗ್ಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಸಂಪೂರ್ಣ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದರಿಂದ ಚುನಾವಣೆಗಾಗಿ ಸಿದ್ಧತೆ ನಡೆಸಿದ್ದ ಅಕಾಂಕ್ಷಿಗಳಿಗೆ ಬೇಸರ ತಂದಿದೆ. ಇನ್ನು ಕಸ್ತೂರಿ ರಂಗನ್‌ ವರದಿಯಲ್ಲಿ ದೇವಾಲದಕೆರೆ, ಹಾನುಬಾಳ್‌, ಕ್ಯಾನಹಳ್ಳಿ ಪಂಚಾಯ್ತಿಯ ಕೆಲವು ಗ್ರಾಮಗಳು ಸೇರ್ಪಡೆಗೊಂಡಿದ್ದರೂ ಈ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಆಶ್ವಾಸನೆ ನಂಬಿ ಚುನಾವಣೆ ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ಹಿಂಪಡೆದಿದ್ದಾರೆ. ತಾಲೂಕಿನಲ್ಲಿ ಒಟ್ಟು26 ಗ್ರಾಪಂಗಳಿದ್ದು, ಇದರಲ್ಲಿ ವನಗೂರು ಮತ್ತು ಉಚ್ಚಂಗಿ ಗ್ರಾಪಂ ಹೊರತು ಉಳಿದ 24 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದೆ.

ಪೊಲೀಸರಿಂದ ಮನವೊಲಿಕೆ: ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಬರುವ ತಾಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಹೆತ್ತೂರು, ಹೊಂಗಡಹಳ್ಳ ಗ್ರಾಪಂ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೊದಲ ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರಿಂದ ಯಾರೂ ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ಈ ವೇಳೆ ಪೊಲೀಸರು ಧ್ವನಿವರ್ದಕದ ಮೂಲಕ ಯಾವುದೇ ಆತಂಕವಿಲ್ಲದೆ, ನಾಮಪತ್ರ ಸಲ್ಲಿಸಿಎಂದು ಧೈರ್ಯ ತುಂಬಿದರಾದರೂ ಯಾರೂ ಉಮೇದುವಾರಿಕೆ ಸಲ್ಲಿಸಲು ಮುಂದಾಗಲಿಲ್ಲ.

ಹೋಬಳಿಯ 4 ಗ್ರಾಪಂನಲ್ಲಿ1ಕ್ಕೆ ಮಾತ್ರ ನಾಮಪತ್ರ ಸಲ್ಲಿಕೆ :

ತಾಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ವನಗೂರು, ಹೆತ್ತೂರು, ಹೊಂಗಡಹಳ್ಳ, ವಳಲಹಳ್ಳಿ ಒಟ್ಟು 4 ಪಂಚಾಯ್ತಿ ಇದ್ದು, ಇದರಲ್ಲಿ ವನಗೂರು ಬಿಟ್ಟು ಉಳಿದ ಮೂರು ಗ್ರಾಪಂಗೆ ಚುನಾವಣೆನಡೆಯುತ್ತಿದೆ. ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಹೆತ್ತೂರು ಹಾಗೂಹೊಂಗಡಹಳ್ಳ ಗ್ರಾಮಸ್ಥರು ತೀವ್ರ ಪ್ರತಿಭಟನೆ ಮಾಡಿದ್ದಾರೆ.ಹೆತ್ತೂರಿನಲ್ಲಿ 5 ಕ್ಷೇತ್ರಗಳ 10 ಸ್ಥಾನಗಳಿಗೆ, ಹೊಂಗಡಹಳ್ಳದಲ್ಲಿ 4ಕ್ಷೇತ್ರಗಳ 6 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ.ಇದೇ ಹೋಬಳಿಯ ವ್ಯಾಪ್ತಿಯ ವಳಲಹಳ್ಳಿ ಗ್ರಾಪಂ ಕಸ್ತೂರಿ ರಂಗನ್‌ ವರದಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಹೀಗಾಗಿ 7 ಕ್ಷೇತ್ರಗಳ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ 26 ನಾಮಪತ್ರಗಳು ಸಲ್ಲಿಕೆಯಾಗಿದೆ.

Advertisement

ಈ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಬೊಬ್ಬನಹಳ್ಳಿ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಇಲ್ಲಿ ಬಿಜೆಪಿ ಬೆಂಬಲಿತ ಶಾರದಾ ಪರಮೇಶ್ವರ್‌ ನಾಯಕ್‌ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆ ಖಚಿತವಾಗಿದೆ.

ನಾಮಪತ್ರ ವಾಪಸ್‌ಗೆ ಮನವೊಲಿಕೆ: ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಅಂತಿಮ ದಿನವಾ ಗಿತ್ತು. ಹೆತ್ತೂರು ಹೋಬಳಿಯ ವಳಲಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾತ್ರ ನಾಮಪತ್ರ ಸಲ್ಲಿಕೆ ಆಗಿದ್ದು, ನಾಮಪತ್ರ ಹಿಂಪಡೆಯುವಂತೆ ಕೆಲ ಗ್ರಾಮಸ್ಥರು ಆಕಾಂಕ್ಷಿಗಳ ಮನವೊಲಿಕೆ ಮಾಡುತ್ತಿದ್ದಾರೆ. ಸೋಮವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಪೊಲೀಸರು ಧ್ವನಿವರ್ದಕದ ಮೂಲಕ ಧೈರ್ಯವಾಗಿ ನಾಮಪತ್ರ ಸಲ್ಲಿಸುವಂತೆ ಹೆತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಮನವಿ ಮಾಡಿದ್ದರೂ ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ. ಇದರಿಂದಾಗಿ ಈ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಚುನಾವಣೆ ರದ್ದಾಗುವುದು ಖಚಿತವಾಗಿದೆ.

ಕಸ್ತೂರಿ ರಂಗನ್‌ ವರದಿ ಹೆತ್ತೂರು ಹೋಬಳಿ ಜನತೆಗೆ ಮಾರಕವಾಗಿದೆ. ನಮಗೆ ಚುನಾವಣೆ ಮುಖ್ಯವಲ್ಲ,ಜೀವನ ಮುಖ್ಯ. ಹೆತ್ತೂರು ಹಾಗೂ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಚುನಾವಣೆಗೆ ಸಲ್ಲಿಕೆಯಾಗಿಲ್ಲ. -ಸಚ್ಚಿನ್‌, ಹೆತ್ತೂರು ಹೋಬಳಿ ಬೆಳೆಗಾರರ ಸಂಘ

ಗ್ರಾಮಸ್ಥರ ತೀರ್ಮಾನದಂತೆ ನಾವು ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದೇನೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಚುನಾವಣೆಗಿಂತ ಜನರ ಹಿತವೇ ಮುಖ್ಯ. ಕೃಷ್ಣಪ್ಪ, ಗ್ರಾಪಂ ಟಿಕೆಟ್‌ ಅಕಾಂಕ್ಷಿ, ಹೆತ್ತೂರು ಎ. ಬ್ಲಾಕ್‌

 

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next