Advertisement

ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶ ಉಳಿಸಿ

06:16 PM Sep 06, 2020 | Suhan S |

ಚಿಕ್ಕಮಗಳೂರು: ಕೋಮುವಾದಿ ಮತ್ತು ಜಾತಿವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಲು ಎಲ್ಲರೂ ಸಂಘಟಿತರಾಗುವುದು ಅನಿವಾರ್ಯ ವೆಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌. ದೇವರಾಜ್‌ ಹೇಳಿದರು.

Advertisement

ಶನಿವಾರ ನಗರದ ಆಜಾದ್‌ ಪಾರ್ಕ್‌ ವೃತ್ತದ ಆವರಣದಲ್ಲಿ “ನಾವು ಭಾರತೀಯರು, ಭಾರತ ಉಳಿಸಿ’ ಆಂದೋಲನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕೈಗೊಂಬೆಯಾಗಿರುವ ಬಿಜೆಪಿ ಪಕ್ಷದಿಂದ ದೇಶವನ್ನು ರಕ್ಷಿಸುವ ಪರಿಸ್ಥಿತಿ ಇದೆ. ಬಿಜೆಪಿ ಸರ್ಕಾರ ಜನಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದರು.

ಡ್ರಗ್ಸ್‌ ಮಾಫಿಯಾಕ್ಕೂ ಬಿಜೆಪಿಗೂ ಹತ್ತಿರದ ನಂಟಿದೆ. ಡ್ರಗ್ಸ್‌ ಮಾಫಿಯಾದೊಂದಿಗೆ ನಂಟು ಹೊಂದಿದ್ದಾರೆನ್ನಲಾಗಿರುವ ಚಲನಚಿತ್ರ ನಟಿ ರಾಗಿಣಿ ಹಿಂದೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿದ್ದಾರೆ. ನಟಿ ರಾಗಿಣಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದಿಂದ ನೈಜ ಭಾರತದ ಅಸ್ತಿತ್ವವೇ ನಾಶವಾಗುತ್ತಿದೆ. ಎದರು. “ನಾವು ಭಾರತೀಯರು, ಭಾರತ ಉಳಿಸಿ’ ಆಂದೋಲನದ ಸಂಚಾಲಕ ಗೌಸ್‌ ಮೊಹಿದ್ದೀನ್‌ ಮಾತನಾಡಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್‌ ಪಾಶ, ಮುಸ್ಲಿಂ ಮುಖಂಡ ನಸ್ರುಲ್ಲಾ ಶರೀಫ್‌, ಕರವೇ ಜಯಪ್ರಕಾಶ್‌, ಬಿಎಸ್ಪಿ ಮುಖಂಡ ಪರಮೇಶ್‌, ದಸಂಸ ಮುಖಂಡ ರಾಜರತ್ನಂ, ಯೂಸೂಫ್‌ ಹಾಜಿ, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್‌, ಜಮೀರ್‌, ಕೃಷ್ಣಮೂರ್ತಿ, ನೀಲಗುಳಿ ಪದ್ಮನಾಭ, ಬ್ಯಾರಿ ಯೂನಿಯನ್‌ನ ಹಮೀದ್‌ ಪಾಶ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next