Advertisement

ಕನ್ಹಯ್ಯಾ ಲಾಲ್ ಹತ್ಯೆ: ಭಾರಿ ಮಳೆಯಲ್ಲಿಯೂ ಬಣಕಲ್-ಕೊಟ್ಟಿಗೆಹಾರದಲ್ಲಿ ಪ್ರತಿಭಟನೆ

02:08 PM Jul 04, 2022 | Team Udayavani |

ಚಿಕ್ಕಮಗಳೂರು: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಹಾರದಲ್ಲಿ ಬಂದ್ ಆಚರಿಸಿ ಸೋಮವಾರ ಭಾರಿ ಪ್ರತಿಭಟನೆ ನಡೆಸಲಾಗಿದೆ.

Advertisement

ಹಿಂದೂಪರ ಸಂಘಟನೆಗಳಿಂದ ಮಳೆ ಮಧ್ಯೆಯೂ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ರಾಜ್ಯ ಟೈಲರ್ ಅಸೋಸಿಯೇಷನ್ ಬಣಕಲ್, ವರ್ತಕರ ಸಂಘ, ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಲಾಗುತ್ತಿದೆ.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರ, ಹಂತಕರ ವಿರುದ್ಧ ಆಕ್ರೋಶ ಹೊರ ಹಾಕಲಾಗಿದ್ದು, ಹತ್ಯೆಯ ಹಂತಕರನ್ನ ಗಲ್ಲಿಗೇರಿಸವಂತೆ ಆಗ್ರಹಿಸಲಾಗಿದೆ.

ಮೂಡಿಗರೆಯ ಕೊಟ್ಟಿಗೆಹಾರ, ಬಣಕಲ್,ಚಕಮಕ್ಕಿ, ಫಲ್ಗುಣಿ, ಸಬ್ಬೆನಹಳ್ಳಿಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next