Advertisement

ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಪ್ರತಿಭಟನೆ

02:22 PM Jul 28, 2022 | Team Udayavani |

ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮುಖಂಡ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ ನೆಟ್ಟಾರನ ಹತ್ಯೆ ಮಾಡಿರುವುದನ್ನು ಖಂಡಿಸಿ ಬುಧವಾರ ಹಿಂದೂ ಜಾಗೃತಿ ಸೇನೆ ಸದಸ್ಯರು ಸರದಾರ ವಲ್ಲಭಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

Advertisement

ಪ್ರವೀಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮೊದಲೇ ಆಲೋಚನೆ ಮಾಡಿ ಕ್ರಮ ಕೈಗೊಳ್ಳಬೇಕಿತ್ತು. ಈಗಲಾದರೂ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರವೀಣ ಹತ್ಯೆ ಮಾಡಿದ ಆರೋಪಿತರನ್ನು ಬಂಧಿಸಬೇಕು. ಇಲ್ಲದೆ ಹೋದರೆ ರಾಜ್ಯದಲ್ಲೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಯುವ ಮುಖಂಡ ಪ್ರವೀಣ ಹತ್ಯೆ ಖಂಡಿಸಿ ಜಿಲ್ಲೆಯ ಯುವ ಘಟಕದ ಪದಾಧಿಕಾರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ನಗರ ಅಧ್ಯಕ್ಷ ದಶರತ್‌ ಇಂಗೋಳೆ, ಉಪಾಧ್ಯಕ್ಷ ತನೀಶ್‌ ಗಾಜರೆ, ಜಿಲ್ಲಾ ಪ್ರಮುಖ ರಾಜು ಕಮಲಾಪುರ, ವಿದ್ಯಾರ್ಥಿ ಘಟಕದ ಪವನ್‌ ಕದಮ್‌, ಮಹಾದೇವ ಕೋಟನೂರು, ಗುರು ಸ್ವಾಮಿ, ಚಿದಾನಂದ ಸ್ವಾಮಿ, ಆನಂದ ಶಿರ್ಕೆ, ಉದಯಕುಮಾರ, ಕೇದಾರನಾಥ ಕಂತಿ, ರಾಜು ಭೋವಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next