Advertisement
ತುರ್ತು ಸೇವೆಗಳು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು, ಅಟೋ ಸಂಚಾರ, ಟೆಂಪೋ ಸಂಚಾರ ಸೇರಿದಂತೆ ಎಲ್ಲವೂ ಸ್ಥಬ್ಧವಾಗಿದ್ದವು. ಬುಧವಾರ ಮುಂಜಾನೆಯಿಂದಲೇ ಯಾವುದೇ ಅಂಗಡಿ, ಹೋಟೆಲ್ ಕೂಡ ತೆರೆಯದೇ ಶಿರಸಿ ಪ್ರತ್ಯೇಕ ಜಿಲ್ಲೆಗೆ ಬೆಂಬಲ ಸೂಚಿಸಿದ್ದವು. ಟಿಎಂಎಸ್ ಸಹಕಾರಿ ಸಂಸ್ಥೆ, ಸರ್ಕಾರಿ ಪದವಿ ಕಾಲೇಜಿಗೆ. ಲಯನ್ಸ್ ಶಾಲೆಗೆ ರಜೆ ಘೋಷಿಸಲಾಗಿತ್ತು. ಬಸ್ ಗಳ ಓಡಾಟ ಇತ್ತಾದರೂ ಜನರಾರು ಏರದೇ ಖಾಲಿಯಾಗಿ ಓಡಾಟ ಮಾಡಿದವು. ಸರಕಾರಿ ಕಚೇರಿಗಳು ತೆರೆದಿದ್ದರೂ ಜನರೇ ಬಾರದೇ ಬಿಕೋ ಎಂದವು.
Related Articles
Advertisement
ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ರಾಜಕೀಯ ಇಚ್ಛಾಶಕ್ತಿ ಕೊರತೆ ಎದುರಾಗಿದೆ. ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಪ್ರತ್ಯೇಕ ಜಿಲ್ಲೆ ಆಗುವ ತನಕ ಹೋರಾಟ ಮಾಡುತ್ತೇವೆ. ಸರಕಾರಕ್ಕೆ ನಮ್ಮ ಬೇಡಿಕೆಯ ಅರಿವಿದೆ. ಕಳೆದ 37 ವರ್ಷಗಳಿಂದ ನಡೆದಿದೆ. ಸರಕಾರ ಬನವಾಸಿಯನ್ನು ತಾಲೂಕೆಂದು ಘೋಷಿಸಿ, ಶಿರಸಿಗೆ ಪ್ರತ್ಯೇಕ ಜಿಲ್ಲಾ ಸ್ಥಾನಮಾನ ಕೊಡಬೇಕು ಎಂದೂ ಹೇಳಿದರು.
ಪ್ರಮುಖರಾದ ಎಂ.ಎಂ.ಭಟ್ಟ, ಪರಮಾನಂದ ಹೆಗಡೆ, ಮಂಜು ಮೊಗೇರ, ಶ್ರೀಧರ ಮೊಗೇರ, ಸಿದ್ದಾಪುರದ ಸಿ.ಎಸ್. ಗೌಡರ್, ಶಿವಾನಂದ ಕಳವೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ್ ದೊಡ್ಮನಿ, ಬಿ.ಶಿವಾಜಿ, ಮಹಾದೇವ ಚೆಲುವಾದಿ ಸೇರಿದಂತೆ ಅನೇಕ ಸಂಘಟನೆಗಳ ಪ್ರಮುಖರು ಇದ್ದರು.