Advertisement

ಅಂಗನವಾಡಿ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

04:47 PM Sep 10, 2022 | Shwetha M |

ನಾಲತವಾಡ: ಕುಸಿಯುವ ಸ್ಥಿತಿಯಲ್ಲಿರುವ ಹಡಗಲಿ ಅಂಗನವಾಡಿ ಕೇಂದ್ರವನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮದ ಯುವಕರು ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

Advertisement

ಅಂಗನವಾಡಿ ಕೇಂದ್ರದ ಸುತ್ತ ಕಂಟಿ ಬೆಳೆದಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ದಿನ ಕಳೆದಂತೆಲ್ಲ ಕೇಂದ್ರದ ಕುಸಿಯುವ ಸಾಧ್ಯತೆ ಇದೆ. ಶೀಘ್ರವೇ ಸಂಬಂಧಿಸಿದರು ಅಂಗನವಾಡಿ ಕೇಂದ್ರವನ್ನು ದುರಸ್ತಿ ಮಾಡಬೇಕು. ನಿರ್ಲಕ್ಷé ತೋರಿದಲ್ಲಿ ಮಕ್ಕಳೊಂದಿಗೆ ಬೀದಿಯಲ್ಲಿ ಕುಳಿತು ಗ್ರಾಪಂ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಯುವಜನ ಸೇನೆಯ ಮುತ್ತು ಟಕ್ಕಳಕಿ, ಎಂ.ಎಚ್‌. ಸಾಂಶಿ, ಸಿದ್ದಮ್ಮ ಓಲೇಕಾರ, ಅಜಮೀರ ಮಸೂತಿ, ಬಸಪ್ಪ ಮರೋಳ, ಧರ್ಮಗೌಡ ಗೌಡರ,ಬಂದಗೀಸಾ ಬೇನಾಳ, ಮಲ್ಲು ಬಂಕದ, ಮುತ್ತು ಬೇನಾಳ, ಸಂಗಪ್ಪ ಬಾರಕೇರ, ರಾಗಪ್ಪ ಮಾಗಿ, ವಿಜಯ ಬಂಕದ, ಬಾಲಾರಿ ಕುರಿ ಹಾಗೂ ಮಡಿವಾಳಪ್ಪ ಮೇಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next