Advertisement

ಸೇವಾ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ: ಹವಾ ಮಲ್ಲಿನಾಥ ಭಾಗಿ

02:34 PM Sep 07, 2022 | Team Udayavani |

ಕಲಬುರಗಿ: ಗ್ರಾಮ ವಿದ್ಯುತ್‌ ಪ್ರತಿನಿಧಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಮ್ಮ ಸೇವಾ ಕಾಯಂಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ನೀರಗುಡಿ ಮಹಾರಾಜರು ಪಾಲ್ಗೊಂಡು ಬೆಂಬಲ ಸೂಚಿಸಿದರು.

Advertisement

ಗ್ರಾಮ ವಿದ್ಯುತ್‌ ಪ್ರತಿನಿಧಿಗಳ ಹೋರಾಟ ನ್ಯಾಯ ಸಮ್ಮತವಾಗಿದೆ. ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ಮಹಾರಾಜರು ಆಗ್ರಹಿಸಿದರು.

ಗ್ರಾಮ ವಿದ್ಯುತ್‌ ಪ್ರತಿನಿಧಿಗಳ ಸೇವಾ ಕಾಯಮಾತಿ ಹೋರಾಟ ಸಮಿತಿ ರಾಜ್ಯ ಗೌರವ ಅಧ್ಯಕ್ಷ ಬಿ.ಡಿ. ಹಿರೇಮಠ, ರಾಜ್ಯಾಧ್ಯಕ್ಷ ಶ್ರೀಕಾಂತರಾಜು, ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ರಾಷ್ಟ್ರೀಯ ವಕ್ತಾರ ವೈಜನಾಥ ಎಸ್‌. ಝಳಕಿ, ಸಮಿತಿಯ ರಾಜ್ಯ ಮುಖಂಡರಾದ ಗುರು ಸಿದ್ಧಪ್ಪ ಬೆನಕನಹಳ್ಳಿ, ನಿವೃತ್ತ ಡಿವೈಎಸ್‌ಪಿ ಅವಂಟಿ ಸರ್‌, ಕಲಬುರಗಿ ಜಿಲ್ಲಾಧ್ಯಕ್ಷ ಸಂದೇಶ ಪವಾರ, ಭೂಮಿಕಾ ಚಿತ್ತಾಪುರ, ಮಂಜುನಾಥ ಬಿರಾದಾರ, ಜೈ ಕರ್ನಾಟಕ ಸಂಘಟನೆ ಮುಖಂಡರಾದ ನಟರಾಜ, ಮುಖಂಡರಾದ ಅರುಣ ಕುಮಾರ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next