Advertisement

ಬೆಲೆ ಏರಿಕೆ ವಿರೋಧಿಸಿ ಶ್ರಮ ಜೀವಿಗಳಿಂದ ಪ್ರತಿಭಟನೆ

12:16 PM Dec 13, 2022 | Team Udayavani |

ದೊಡ್ಡಬಳ್ಳಾಪುರ: ಕನ್ನಡ ಜಾಗೃತ ಪರಿಷತ್‌ನಿಂದ ಬೆಲೆ ಏರಿಕೆ, ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಎಚ್ಚರಿಸುವ ನಿಟ್ಟಿನಲ್ಲಿ ಶ್ರಮ ಜೀವಿಗಳ ಪ್ರತಿಭಟನೆ ಕಾರ್ಯಕ್ರಮ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನಡೆಯಿತು.

Advertisement

ಕನ್ನಡ ಜಾಗೃತ ಪರಿಷತ್‌ನ ಅಧ್ಯಕ್ಷ ಕೆ.ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮಾತನಾಡಿ, ಕೋವಿಡ್‌ನಿಂದ ಜನ ಚೇತರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬೆಲೆ ಏರಿಕೆಯ ಹೊಡೆತ ಜನಸಾಮಾನ್ಯರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ದಿನಸಿ ಪದಾರ್ಥಗಳು ತೈಲ ಬೆಲೆ, ಶಿಕ್ಷಣ, ಆರೋಗ್ಯ ಮೊದಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಬೆಲೆ ಏರಿಕೆಗಳಿಂದಾಗಿ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ ಎಂದು ಹೇಳಿದರು.

ಜನವಿರೋಧಿ ನೀತಿ: ಸರ್ಕಾರದ ಜನ ವಿರೋಧಿ ನೀತಿ ಗಳನ್ನು ಜನರಿಗೆ ತಿಳಿಸಲು, ಆರ್ಥಿಕ ಸಬಲತೆ ಇರುವ ಎಲ್ಲರಿಗೂ ಮಾನವೀಯತೆ ಪರಿಚಯ, ದುಡ್ಡಿದ್ದವರಿಗೆ ಅಂತರಂಗ ಹಾಜರಿ ಪರಿಚಯ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ವಸೂಲಿ: ಜಾಗತಿಕ ಮಾರುಕಟ್ಟೆಯಲ್ಲಿ ಇಂದಿನ ಕಚ್ಚಾ ತೈಲದ ಬೆಲೆಗೆ ಅನುಸಾರವಾಗಿ ಪೆಟ್ರೋಲ್‌ ಬೆಲೆ 32 ರೂ. ಇರಬೇಕಿದೆ. ಆದರೆ, ಕೇಂದ್ರದ ಸರ್ಕಾರ ತೈಲ ಬೆಲೆಗಳ ಮೇಲೆ ನಿಯಂತ್ರಣವಿಲ್ಲದೇ 102 ರೂ.ಗೆ ಏರಿಸಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 37 ರೂ., ಡೀಸೆಲ್‌ ಮೇಲೆ 36 ರೂ. ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.

ಸುಳ್ಳು ಪುರಾಣ ನಿಲ್ಲಿಸಬೇಕು: ಖಾಸಗೀಕರಣದ ನೆಪ ದಲ್ಲಿ ದೊಡ್ಡ ಉದ್ಯಮಿಗಳಿಗೆ ನೆರವು ನೀಡುವ ಸರ್ಕಾರ ಅವರಿಂದ ಮತ್ತೆ ಯಾವುದೇ ಸಹಾಯ ಪಡೆಯು ವುದಿಲ್ಲ. ಕೂಡಲೇ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಎಲ್ಲದರ ಬೆಲೆ ಇಳಿಸಬೇಕು. ಅಭಿವೃದ್ಧಿಯ ಸುಳ್ಳು ಪುರಾಣಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Advertisement

ಗಟ್ಟಿಧ್ವನಿಯಲ್ಲಿ ಕೇಳಬೇಕಿದೆ: ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್‌ ಮಾತನಾಡಿ, ರಾಮರಾಜ್ಯ, ಅಚ್ಚೇದಿನ್‌ ಎಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ರೂ ಜನರಿಗೆ ಇಂದಿನ ವಾಸ್ತವ ಅರಿವಾಗುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲು ನಮ್ಮ ಜನಪ್ರತಿನಿ ಧಿಗಳು ಹಿಂದೆ ಸರಿಯುತ್ತಿದ್ದಾರೆ. ಜನಸಾಮಾನ್ಯರ ಬದುಕು ದಿನೇ ದಿನೆ ದುಸ್ತರವಾಗುತ್ತಿದ್ದರೂ ಆಳುತ್ತಿರುವ ಸರ್ಕಾರಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಜನತೆ ಗಟ್ಟಿ ಧ್ವನಿಯಲ್ಲಿ ಕೇಳಬೇಕಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಹಿರಿಯ ಮುಖಂಡರಾದ ಸಂಜೀವ್‌ ನಾಯಕ್‌, ಆರ್‌. ರಂಗನಾಥ್‌, ಜಿಲ್ಲಾ ಕಾರ್ಯದರ್ಶಿ ಮುನಿಪಾಪಯ್ಯ, ಪರಮೇಶ್‌, ಕರವೇ ಪ್ರವೀಣ್‌ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ತಾಲೂಕು ಅಧ್ಯಕ್ಷ ಹಮಾಮ್‌ ವೆಂಕಟೇಶ್‌, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್‌, ಮುಖಂಡರಾದ ನಾಗರಾಜ್‌, ಸುನೀಲ್‌ ಬಸವರಾಜ್‌, ಹಬೀಬ್‌, ಸೂರಿ, ಮಂಜುನಾಥ್‌, ದಿವಾಕರ್‌, ರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next