Advertisement

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

11:47 AM Sep 29, 2020 | Suhan S |

ನೆಲಮಂಗಲ: ತಾಲೂಕಿನ ವಿವಿಧ ಸಂಘಟನೆಗಳು ಹಾಗೂ ವರ್ತಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು.

Advertisement

ನಗರದ ಹಣ್ಣು ತರಕಾರಿ ಮಾರುಕಟ್ಟೆ ಮಾರಾಟಗಾರರು ಹಾಗೂ ವರ್ತಕರು ಅಂಗಡಿ ಬಂದ್‌ ಮಾಡುವ ಮೂಲಕ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತ ವಿರೋಧಿ ಕಾಯ್ದೆ ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಹೋಬಳಿ ಅಧ್ಯಕ್ಷಮಂಜೇಗೌಡ ನೇತೃತ್ವದಲ್ಲಿ ಮಾಕಳಿಯ ಹೆದ್ದಾರಿ ಸಮೀಪದಲ್ಲಿ ಪ್ರತಿಭಟನೆ ಜಾಥಾ ಮಾಡಿ ತಹಶೀಲ್ದಾರ್‌ ಶ್ರೀನಿವಾಸ್‌ಗೆ ಮನವಿ ಸಲ್ಲಿಸಿದರು.

ಎಸ್ಪಿ ಪರಿಶೀಲನೆ: ತಾಲೂಕಿನಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆದ್ಧಾರಿ ಹಾಗೂ ವಿವಿಧ ವೃತ್ತಗಳಿಗೆ ಎಸ್ಪಿ ರವಿ ಡಿ. ಚೆನ್ನಣ್ಣನವರ್‌, ಡಿವೈಎಸ್‌ಪಿ ಮೋಹನ್‌ಕುಮಾರ್‌ ಪರಿಶೀಲನೆ ಭೇಟಿ ನೀಡಿ ಶಾಂತಿ ಕಾಪಾಡಿ ಎಂದು ಸಲಹೆ ನೀಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next