Advertisement

ಅಧಿಕಾರಿ ವಿರುದ್ಧ ದಿವ್ಯಾಂಗರ ಪ್ರತಿಭಟನೆ

02:39 PM May 11, 2022 | Shwetha M |

ವಿಜಯಪುರ: ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ದಿವ್ಯಾಂಗರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿ ಸೇರಿದಂತೆ ಅವ್ಯವಹಾರದಲ್ಲಿ ತೊಡಗಿದ್ದು, ದಿವ್ಯಾಂಗರ ಸೌಲಭ್ಯ ಪಡೆಯಲು ತೊಡಕಾರಿಗಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಿವ್ಯಾಂಗರು, ಕಳೆದ ಆರು ತಿಂಗಳ ಹಿಂದೆ ಸದರಿ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಪರಿಣಾಮ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದ ಖೇಡ, ಸದರಿ ಅಧಿಕಾರಿ ನಡೆಸಿರುವ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳು ವಿಜಯಪುರ ಉಪ ವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.

3-4 ಭಾರಿ ವಿಚಾರಣೆ ನೋಟಿಸ್‌ ನೀಡಿ ಒಮ್ಮೆ ವಿಚಾರಣೆ ನಡೆಸಿದ್ದಾರೆ. ವಿಚಾರಣಾ ಸಮಯದಲ್ಲಿ ನಾವು ಸಲ್ಲಿಸಿದ ಆಕ್ಷೇಪಣೆಗಳಿಗೆ ಲಗತ್ತಿಸಿ ಸಲ್ಲಿಸಿದ ದಾಖಲೆಗಳ ದೂರಿನಲ್ಲಿ ಅಪಾದನೆ ದೃಢಪಟ್ಟಿಲ್ಲ ಎಂದಿದ್ದಾರೆ. ಕಾರಣ ಸದರಿ ಪ್ರಕರಣವನ್ನು ಮರುಪರಿಶೀಲಿಸಿ ಅಂಗವಿಕಲರ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಮತನಾಡಿ, ಉಪ ವಿಭಾಗಾಧಿಕಾರಿಗಳು, ದಿವ್ಯಾಂಗರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಇಲಾಖೆ ಅಕಾರಿ ವಿರುದ್ಧದ ಯಾವ ಆಪಾದನೆಗೆ ಯಾವ ದಾಖಲಾತಿಗಳನ್ನು ನೀಡಿಲ್ಲ. ನೇಮಕಾತಿ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾರೆ. ಕಾನೂನು ಬಾಹಿರ ಕೆಸಲ ಮಾಡಿದ್ದರೂ ಸದರಿ ಅಧಿಕಾರಿಗಳ ರಕ್ಷಣೆ ಮಾಡುವ ಮೂಲಕ ದಿವ್ಯಾಂಗರ ಹಕ್ಕುಗಳನ್ನು ಕಸಿಯಾಲಗುತ್ತಿದೆ ಎಂದು ಹರಿಹಾಯ್ದರು.

Advertisement

ಸದರಿ ಅಧಿಕಾರಿಯ ಭ್ರಷ್ಟಾಚಾರಕ್ಕೆ ತನಿಖಾಧಿಕಾರಿಗಳು ತನಿಖೆ ನಡೆಸದೇ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನವಿದೆ. ಇದರಿಂದ ದಿವ್ಯಾಂಗರು ಕಂಗಾಲಾಗಿದ್ದು, ನಮ್ಮ ಬಾಳಿಗೆ ದಾರಿದೀಪವಾಗಬೇಕಾದ ಉನ್ನತ ಮಟ್ಟದ ಅಧಿಕಾರಿಗಳೆ ನಮ್ಮ ಭಾವನೆ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿದ್ದು, ಯಾರಲ್ಲಿ ನ್ಯಾಯ ಕೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.

ಮಲ್ಲಿಕಾರ್ಜುನ ಉಮರಾಣಿ ಮಾತನಾಡಿ, ಜಿಲ್ಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೇಮಕಾತಿಯಲ್ಲಿ ದಿವ್ಯಾಂಗರ ನೇಮಕಕ್ಕೆ ಸರಕಾರದ ಆದೇಶವಿದ್ದರೂ ಅಂಗವಿಕಲರ ಕಲ್ಯಾಣ ಅಧಿಕಾರಿ ಗಳು ಸರ್ಕಾರದ ಆದೇಶ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ದೂರಿದರು.

ಸಂಘಟನೆಯ ಪ್ರಮುಖರಾದ ತಾಲೂಕಾಧ್ಯಕ್ಷ ಅಂಬಣ್ಣ ಗುನ್ನಾಪುರ, ಶಂಕ್ರಮ್ಮ ಕೋರಿ, ಇಂಡಿ ತಾಲೂಕಾ ಕಾರ್ಯದರ್ಶಿ ಶಿವಲಿಂಗಪ್ಪ, ಸಾವಿತ್ರಿ ಮೋರೆ, ರಮೀಜಾ ಮಕಾನಂದರ, ಸುನಿಲ ತೇಲಕರ, ಅನಿಲ ಪವಾರ, ನಿಮಿಷ ಆಚಾರ್ಯ, ನಾಗಪ್ಪ ಬೆಂಕಿ, ಅರುಣ ವಾಗದಂಡೆ, ನೂರಹ್ಮದ ಪಠಾಣ, ಅಶೋಕ ಚೋಳಕ್ಕೆ, ಎಸ್‌.ಜಿ.ಮೆಂಡೆಗಾರ, ಮುಸ್ತಾಕ ತಾಳಿಕೋಟಿ, ಸಂಗಮೇಶ ಉಕ್ಕಲಿ, ಉ‚ಷಾ ಮೈಲಕರ, ಸಾಗಾರ ಸಾವಳಗಿ, ಜಿ.ಆರ್‌ ರಾಠೊಡ ಮತ್ತು ವಿ.ಯಾ ರಾಠೊಡ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next