Advertisement

ತೀಸ್‌ ಹಜಾರಿ ಘಟನೆ ಖಂಡಿಸಿ ಪ್ರತಿಭಟನೆ

06:01 PM Nov 05, 2019 | Team Udayavani |

ಶಹಾಪುರ: ದೆಹಲಿ ತೀಸ್‌ ಹಜಾರಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಮಾರಾಮಾರಿ ಘಟನೆಗೆ ಪೊಲೀಸರೇ ಹೊಣೆಗಾರರು ಎಂದು ಆರೋಪಿಸಿ ಸೋಮವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್‌. ರಾಂಪುರೆ, ಅನವಶ್ಯಕವಾಗಿ ವಕೀಲರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡನೀಯವಾಗಿದೆ. ವಕೀಲರ ಮೇಲೆ ಒಂದಿಲ್ಲ ಒಂದು ಕಾರಣದಿಂದ ಹಲ್ಲೆ ನಡೆಯುತ್ತಿದೆ. ಸಾರ್ವಜನಿಕರ ಹಕ್ಕು ರಕ್ಷಣೆ ಮತ್ತು ಸದಾ ಕಕ್ಷಿದಾರರ ಹಿತರಕ್ಷಿಸಲು ಯತ್ನಿಸುತ್ತಿರುವ ವಕೀಲರನ್ನು ಗುರಿಯಾಗಿಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ಸರಿಯಲ್ಲ ಎಂದರು. ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರಬೇಕು. ತಪ್ಪಿತಸ್ಥ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆಯನ್ನು ರೂಪಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ಸೈಯ್ಯದ್‌ ಇಬ್ರಾಹಿಂಸಾಬ್‌ ಜಮಾದಾರ, ಹಣಮಂತರಾಯ ಪಾಟೀಲ, ಮಲ್ಲಪ್ಪ ಪೂಜಾರಿ, ವಾಸುದೇವ ಕಟ್ಟಿಮನಿ, ಗುರುರಾಜ ದೇಶಪಾಂಡೆ, ನಾಗೇಂದ್ರ ಬಳಬಟ್ಟಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ, ಹಯ್ನಾಳಪ್ಪ ಹೊಸ್ಮನಿ, ಶರಬಣ್ಣ ರಸ್ತಾಪುರ, ಶಿವಶರಣಪ್ಪ ಹೊಸ್ಮನಿ, ಬಸಮ್ಮ ರಾಂಪುರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next