Advertisement

ಸಂಪ್ಯ ಠಾಣಾ ಎಸ್‌ಐ, ಸಿಬಂದಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ 

04:19 PM Dec 30, 2017 | Team Udayavani |

ನಗರ: ಸಂಪ್ಯ ಠಾಣಾಧಿಕಾರಿ ಮತ್ತು ಮೂವರು ಸಿಬಂದಿಯ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಅವರ ಅಮಾನತಿಗೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯು ಮಿನಿ ವಿಧಾನ ಸೌಧದ ಎದುರು ಹಮ್ಮಿಕೊಂಡ ಸರಣಿ- ಧರಣಿ ಪ್ರತಿಭಟನೆ ನಾಲ್ಕನೇ ದಿನವೂ ನಡೆಯಿತು. ಶುಕ್ರವಾರ ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆ ಘಟಕದ ವತಿಯಿಂದ ಧರಣಿ ನಡೆಯಿತು.

Advertisement

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ್‌ ಬೆಳ್ಳಾರೆ ಮಾತನಾಡಿ, ಇಲಾಖೆಯ ಗೌರವವನ್ನು ಎತ್ತಿ ಹಿಡಿಯಬೇಕಾಗಿದ್ದ ಆರೋಪಿತ ಪೋಲೀಸರು ಹಿಂದೂ ವಿರೋಧಿ ನೀತಿಯನ್ನು ದೌರ್ಜನ್ಯದ ಮೂಲಕ ಪ್ರದರ್ಶಿಸಿದ್ದಾರೆ. ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ. ಜ. 2ರಂದು ಅಷ್ಟ ದಿಕ್ಕುಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪುತ್ತೂರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಸ್ವಾಭಿಮಾನಿ ಹಿಂದೂಗಳು ಪಾದ ಯಾತ್ರೆಯ ಮೂಲಕ ಆಗಮಿಸಲಿದ್ದಾರೆ. ಸಂಜೆ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೃಹತ್‌ ಹಿಂದೂ ಜಾಗೃತಿ ಸಮಾವೇಶ ನಡೆಯಲಿದೆ ಎಂದರು.

ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಮಾತನಾಡಿ, ಅಬ್ದುಲ್‌
ಖಾದರ್‌ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಯಾಗಿ ಬಂದ ಬಳಿಕ 2 ವರ್ಷಗಳಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಗೋಪಾಲ್‌ ನಾೖಕ್‌ ಏಳ್ಮು ಡಿ, ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತ್ತಾಯ, ಮಂಗಳೂರು ವಿಭಾಗ ಸಹಸಂಚಾಲಕ ರವಿರಾಜ್‌ ಶೆಟ್ಟಿ ಕಡಬ, ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ, ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಳಾಯಿ, ಕಾರ್ಯದರ್ಶಿ ಯೋಗೀಶ್‌, ಸಂಘಟನಾ ಕಾರ್ಯದರ್ಶಿ ಜಗದೀಶ್‌, ಜಿಲ್ಲಾ ಸಂಘಟನ ಕಾರ್ಯದರ್ಶಿ ಬಾಲಕೃಷ್ಣ, ಜಗದೀಶ್‌ ನೆತ್ತರಕೆರೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕರ್ತರ ಆಕ್ರೋಶ 
ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ಅವರು ಅನುಸರಿಸುತ್ತಿರುವ ಹಿಂದೂ ವಿರೋಧಿ ನೀತಿಗೆ ಘೋಷಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪಿಎಫ್‌ಐ ಜತೆ ಸೇರಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next