Advertisement
ನಗರದ ನೆಲದಾಂಜನೆಯ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಟಾಂಗಾ ಹಾಗೂ ಸೈಕಲ್ ಸವಾರಿ ಮಾಡಿದರೆ, ಕಾರ್ಯಕರ್ತರು ಕತ್ತೆಗಳ ಮೆರವಣಿಗೆ ಮಾಡಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಟಿ.ಎಸ್. ಶಿವರಾಜ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
Related Articles
Advertisement
ಎಲ್ಲರೂ ಒಂದಾಗಿ ಹೋರಾಡೋಣ: ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರಾಳ ಶಾಸನ ಹಾಗೂ ಜನವಿರೋಧಿ ಕಾರ್ಯಗಳನ್ನು ಉಗ್ರವಾಗಿ ಖಂಡಿಸಬೇಕಿದೆ. ಈ ಸರ್ಕಾರಗಳು ಜನರಮನದಲ್ಲಿ ಹತಾಶೆ ಭಾವನೆ ಮೂಡಿಸಿದೆ. ಬಿಜೆಪಿ ಸರ್ಕಾರ ಇಂದು ಬಡ ಕಾರ್ಮಿಕರ, ಕೂಲಿಕಾರ್ಮಿಕರ ಬಾಳನ್ನು ಹದಗೆಡಿಸಿದೆ. ಪ್ರತಿಭಟನೆಗೆ ಕಿಂಚಿತ್ತೂ ಬೆಲೆ ಕೊಡದೆ ತನ್ನದೇ ಆದ ನಿಲುವುಪ್ರದರ್ಶನ ಮಾಡುತ್ತಿರುವ ಸರ್ಕಾರದ ವಿರುದ್ಧಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ, ನಗರಘಟಕದ ಅಧ್ಯಕ್ಷ ಅಂಜನಮೂರ್ತಿ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಜಿಪಂ ಸದಸ್ಯಚುಂಚೇಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ,ಮುಖಂಡ ತಿ.ರಂಗರಾಜು, ಕೃಷ್ಣಮೂರ್ತಿ, ಕುಮುದಾ ಹಾಗೂ ಕಾರ್ಯಕರ್ತರು ಇದ್ದರು.
ಮೋದಿ ಸರ್ಕಾರವಲ್ಲ ಅಂಬಾನಿ, ಅದಾನಿ ಸರ್ಕಾರ :
ಅಡಿಗೆ ಅನಿಲದ ಬೆಲೆ ಸಬ್ಸಿಡಿ ಹೆಸರಿನಲ್ಲಿ ಪದೇ ಪದೇ ಹೆಚ್ಚಿಸುತ್ತಿದ್ದು, 400 ರೂ. ಇದ್ದ ಸಿಲಿಂಡರ್ ಬೆಲೆಯನ್ನು 800ರ ಗಡಿಗೆ ತಲುಪಿದೆ. ಈಗಿನ ಕಾಲಮಾನದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್
ಎಲ್ಲ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಾಗಿವೆ. ಅಂಬಾನಿ, ಆಧಾನಿಯಂತಹ ವ್ಯಾಪಾರಿಗಳಿಗೆ ಸುಂಕ ವಿಧಿಸದೆ ಕೇವಲ ಬಡವರ ಮೇಲೆ ಮಾತ್ರ ವಿಧಿಸುತ್ತಾ ಬಡವರ ಮತ್ತು ಜನಸಾಮಾನ್ಯರ ರಕ್ತ ಹೀರಲಾಗುತ್ತಿದೆ. ಕೊರೊನಾದಿಂದ ಹಲವಾರು ಕಾರ್ಖಾನೆ ಮತ್ತು ವ್ಯವಹಾರಗಳು ನಷ್ಟ ವಾಗಿದ್ದರೂ, ಅಂಬಾನಿ, ಆಧಾನಿ ಮಾತ್ರ ಹಾಗೆ ಇದ್ದಾರೆಂದರೆ ಕಾರಣ ಕೇಂದ್ರ ಸರ್ಕಾರ. ಇದು ಮೋದಿ ಸರ್ಕಾರವಲ್ಲ ಅಂಬಾನಿ, ಅದಾನಿ ಸರ್ಕಾರ ಎಂದು ಶಾಸಕ ಕೃಷ್ಣಭೈರೇಗೌಡ ಆರೋಪಿಸಿದರು.