Advertisement

ಕಲಬುರಗಿ: ಕಂಟೈನ್ ಮೆಂಟ್ ಝೋನ್ ತೆರವುಗೊಳಿಸಲು ಬಂದ ಸಂಸದ ಜಾಧವ್ ಗೆ ಘೇರಾವ್

03:22 PM May 10, 2020 | Team Udayavani |

ಕಲಬುರಗಿ: ಜಿಲ್ಲೆಯ ವಾಡಿ ಪಟ್ಟಣದಲ್ಲಿ ಕಂಟೈನ್ ಮೆಂಟ್ ಝೋನ್ ಮುಕ್ತಗೊಳಿಸಲು ತೆರಳಿದ್ದ ಸಂಸದ ಡಾ.ಉಮೇಶ ಜಾಧವ್ ಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ರವಿವಾರ ನಡೆದಿದೆ.

Advertisement

ಎರಡು ವರ್ಷದ ಮಗುವಿಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ‌ ಮಗುವಿನ ಕುಟುಂಬ ವಾಸವಿದ್ದ ಪಿಲಕಮ್ಮ ಬಡಾವಣೆಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿ ಸೀಲ್ ಡೌನ್ ಮಾಡಲಾಗಿತ್ತು.

ಮಗು ಸೋಂಕು ಮುಕ್ತವಾಗಿದ್ದು, ಆ ಬಡಾವಣೆಯಲ್ಲಿ ಮತ್ತೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಅಲ್ಲದೇ, ಸೀಲ್ ಡೌನ್ ಮಾಡಿ 28 ದಿನಗಳ ಕಳೆದಿರುವುದರಿಂದ ರವಿವಾರ ಸಂಸದ ಜಾಧವ್ ಬಡಾವಣೆಗೆ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಲು ಬಂದಿದ್ದರು.

ಆದರೆ, ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಎಷ್ಟು ದಿನ ಸೀಲ್ ಡೌನ್ ಇದ್ದರೂ, ಬಡಾವಣೆ ಜನರನ್ನು ಪರಿಸ್ಥಿತಿ ನೋಡಲು ಬಾರದ ಸಂಸದರು ಈಗ ಬಂದಿದ್ದಾರೆ. ಸಂಸದರು ಕಂಟೈನ್ ಮೆಂಟ್ ಝೋನ್ ತೆರವುಗೊಳಿಸುವುದು ಬೇಡ. ಪೊಲೀಸರು, ಆರೋಗ್ಯ ಇಲಾಖೆಯೇ ಅಧಿಕಾರಿಗಳು ತರೆವುಗೊಳಿಸಲಿ ಎಂದು ಸಂಸದ ಜಾಧವ್ ಗೆ ಘೇರಾವ್ ಹಾಕಿದರು.

ಪೊಲೀಸರು ಮಧ್ಯ ಪ್ರವೇಶಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದರು.‌ ಆಗ ಸಂಸದ ಜಾಧವ್ ಬ್ಯಾರಿಕೇಡ್ ತೆರೆಯುವ ಮೂಲಕ ಕಂಟೈನ್ ಮೆಂಟ್ ಝೋನ್ ಮುಕ್ತಗೊಳಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂಸದರಿಗೆ ಶೇಮ್ ಶೇಮ್ ಎಂದು ಕೂಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next