Advertisement

ಹುಣಸೂರು: ಅಗ್ನಿಪಥ್‌ ಯೋಜನೆ ವಿರೋಧಿಸಿ ಶಾಸಕ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ  

04:58 PM Jun 27, 2022 | Team Udayavani |

ಹುಣಸೂರು: ನಗರದಲ್ಲಿ ಶಾಸಕ ಹೆಚ್ ಪಿ ಮಂಜುನಾಥ ರವರ ನೇತೃತ್ವದಲ್ಲಿ  ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯ ವಿರುದ್ದ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯಲ್ಲಿ  ಶಾಸಕ ಎಚ್ ಪಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ನೀವು ಅನುಷ್ಠಾನಗೊಳಿಸುತ್ತಿರುವ ಅಗ್ನಿಪಥ್ ನ ನೀತಿ ನಿಯಮಗಳಿಗೆ ನಮ್ಮ ವಿರೋಧವಿದೆ ಎಂದರು.

ಹೊಸ ನೀತಿ ನಿಯಮದಿಂದ ಸೈನ್ಯದ ಬಲ ಕುಗ್ಗುತ್ತದೆ. ಕೇವಲ ನಾಲ್ಕು ವರ್ಷ ಯುವಶಕ್ತಿಯನ್ಜು ಬಳಸಿಕೊಂಡು ನಂತರ ವಾಪಸ್ ಮನೆಗೆ ಕಳಿಸುವುದರಿಂದ  ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಅಗ್ನಿಪಥ ಯೋಜನೆಯಲ್ಲಿ ನೇಮಕಗೊಂಡವರಿಗೆ  ಇತರೆ ಸೈನಿಕರಿಗೆ ನೀಡುವಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು.

ಅವರಿಗೆ ಪೂರ್ಣಾವಧಿ ಉದ್ಯೋಗದ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next