Advertisement

ಹೆದ್ದಾರಿ ಬಂದ್‌ ಒಂದೆರಡು ಗಂಟೆಗೆ ಸೀಮಿತ

03:27 PM Feb 07, 2021 | Team Udayavani |

ಮೈಸೂರು: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ದೇಶಾದ್ಯಂತ ಕರೆ ನೀಡಿರುವ ರಸ್ತೆ ತಡೆ ಪ್ರತಿಭಟನೆ ಬೆಂಬಲಿಸಿ ಶನಿವಾರ ನಗರದಲ್ಲಿ ರೈತ ಪರ ಸಂಘ ಟನೆಗಳು ಪ್ರತ್ಯೇಕವಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದವು.

Advertisement

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂವಿಧಾನ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಇತರೆ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ಸರ್ಕಲ್‌ ಬಳಿ ಜಮಾವಣೆ ಗೊಂಡು ಒಂದು ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟಿಸಿದರು.

ಪೊಲೀಸರೊಂದಿಗೆ ವಾಗ್ವಾದ: ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೃತ್ತದ ಬಳಿ ಡಿಸಿಪಿ ಪ್ರಕಾಶ್‌ ಗೌಡ, ಗೀತಾ ಪ್ರಸನ್ನ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸರು ಇದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರಂತರ ನಡುವೆ ವಾಗ್ವಾದ ನಡೆಯಿತು. ಮಧ್ಯಾಹ್ನ 1 ಗಂಟೆಯಾಗುತ್ತಿದ್ದಂತೆ ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರು. ಆದರೆ, ತಾವು ಮಧ್ಯಾಹ್ನ 3 ಗಂಟೆಯವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರ ಹಠ ಹಿಡಿದ ಕಾರಣ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

 ಇದನ್ನೂ ಓದಿ :ಯಾದಗಿರಿಯಲ್ಲೂ ಪ್ರತಿಭಟನೆ-ಮನವಿ

ಬಳಿಕ ಪೊಲೀಸರು ರೈತರನ್ನು ಬಂಧಿಸಿ 1 ಬಸ್‌ಗಳಲ್ಲಿ ಕರೆದೊಯ್ದು ಡಿಆರ್‌ ಗ್ರೌಂಡ್‌ನ‌ಲ್ಲಿ ಬಿಡುಗಡೆ  ಮಾಡಿ ದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟೆ ಬಸವರಾಜು, ಮರಂಕಯ್ಯ, ಪುನೀತ್‌, ಉಮಾದೇವಿ, ಎಂ. ಲಕ್ಷ್ಮಣ್‌, ಚಂದ್ರಶೇಖರ್‌ ಮೇಟಿ, ಶಬ್ಬೀರ್‌ ಮುಸ್ತಾಫ‌, ಸಂಧ್ಯಾ ಇತರರಿ ದ್ದರು. ಪ್ರತಿಭಟನೆ ಹಿನ್ನೆಲೆ ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿದ ವಾಹನ ಸಂಚಾರ ಮಧ್ಯಾಹ್ನ 1.30ರಿಂದ ಮತ್ತೆ ಆರಂಭಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next