Advertisement

ಭಗವಾನ್‌ ಮುಖಕ್ಕೆ ಮಸಿ ಖಂಡಿಸಿ ಪ್ರತಿಭಟನೆ

03:47 PM Feb 07, 2021 | Team Udayavani |

ತಿ.ನರಸೀಪುರ: ಬೆಂಗಳೂರಿನ ನ್ಯಾಯಾಲಯದಲ್ಲಿ ಸಾಹಿತಿ ಕೆ.ಎಸ್‌.ಭಗವಾನ್‌ ಮುಖಕ್ಕೆ ಮಸಿ ಬಳಿದು ಅಪಮಾನ ಮಾಡಿರುವ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್‌ ಪುತ್ಥಳಿಮುಂಭಾಗ ಜಮಾಯಿಸಿದ  ಪದಾಧಿಕಾರಿಗಳು, ಭಗವಾನ್‌ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಬಳಿಕ ತಹಶೀಲ್ದಾರ್‌ ಡಿ.ನಾಗೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಇದನ್ನೂ ಓದಿ :ಹೆದ್ದಾರಿ ಬಂದ್‌ಗೆ ವ್ಯಾಪಕ ಬೆಂಬಲ

ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಸಂಚಾಲಕ ಡಾ.ಆಲಗೂಡು ಎಸ್‌.ಚಂದ್ರಶೇಖರ್‌, ಸಂಘಟನಾ ಸಂಚಾಲಕರಾದ ಎಸ್‌. ಆರ್‌.ಶಶಿಕಾಂತ್‌ ಸೋಸ್ಲೆ, ಮಂಜುನಾಥ ತುಂಬಲ, ಬನ್ನಹಳ್ಳಿ ಸೋಮಣ್ಣ, ಸುರೇಶ ಯರಗನಹಳ್ಳಿ, ಕೆಂಪಯ್ಯನಹುಂಡಿ ರಾಜು, ನಾಗರಾಜು ವಾಟಾಳು, ಮುಖಂಡರಾದ ಆಲಗೂಡು ಶಿವಣ್ಣ, ಕುಕ್ಕೂರು ರಾಜು, ಚಿಕ್ಕವೀರಯ್ಯ,ಸೋಸಲೆ ನಂಜುಂಡಸ್ವಾಮಿ, ಬಸವರಾಜು, ಪುಟ್ಟಸ್ವಾಮಿ, ಕೊಳತ್ತೂರು ಪಿ.ಮಹದೇವಸ್ವಾಮಿ, ಮಧುಸೂದನ್‌, ಮಹದೆವಸ್ವಾಮಿ, ಕನ್ನಾಯಕನಹಳ್ಳಿ ಮರಿಸ್ವಾಮಿ, ಮನೋಜ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next