Advertisement

ಸಮುದ್ರ ಪಾಲಾಗುತ್ತಿದ್ದವರ ರಕ್ಷಿಸಿದ ಉಳ್ಳಾಲ ಜೀವರಕ್ಷಕ ಈಜುಗಾರರ ಸಂಘ

06:01 PM Apr 26, 2019 | Team Udayavani |

ಉಳ್ಳಾಲ: ಪ್ರವಾಸಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದ ಮೈಸೂರು ಮೂಲದ ಇಬ್ಬರು ಮಹಿಳೆಯರು ಸಮುದ್ರ ಪಾಲಾಗುತ್ತಿದ್ದ ಸಂದರ್ಭದಲ್ಲಿ ಜೀವರಕ್ಷಕ ಸಂಘದ ಈಜುಗಾರರು ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದಿದೆ.

Advertisement

ಬೇಸಿಗೆ ರಜೆ ಹಿನ್ನೆಲೆ, ಉಳ್ಳಾಲ ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜೀವರಕ್ಷಕರ ಮಾತು ಕೇಳದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಇಂದು ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ಜೀವರಕ್ಷಕ ಈಜುಗಾರರ ಸಂಘದ ಸಮಯ ಪ್ರಜ್ಞೆಯಿಂದ ತಪ್ಪಿದೆ.

ಕರಾವಳಿ ನಿಯಂತ್ರಣ ದಳದ ಪ್ರಸಾದ್ ಸುವರ್ಣ, ಜೀವರಕ್ಷಕ ಸಂಘದ ಶಶಿಧರ್ ಕರ್ಕೇರ, ನವೀನ್ ಅಮೀನ್, ಜಿತೇಂದ್ರ ಬಂಗೇರ ಮೋಹನ್ ಪುತ್ರನ್ , ಸುರೇಶ್ ತಂಡದಿಂದ ರಕ್ಷಣಾ ಕಾರ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next