Advertisement

ಹುಣಸೂರು: ವಿವಿಧೆಡೆ ದಾಳಿ ಮೂವರು ಕಿಶೋರ ಕಾರ್ಮಿಕರ ರಕ್ಷಣೆ

11:01 AM Jan 01, 2022 | Team Udayavani |

ಹುಣಸೂರು: ನಗರದ ವಿವಿಧ ಅಂಗಡಿ ಮಳಿಗೆ, ವರ್ಕ್‍ ಶಾಪ್‌ಗಳ ಮೇಲೆ ಕಾರ್ಮಿಕ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಧಿಡೀರ್ ದಾಳಿ ನಡೆಸಿದ ವೇಳೆ, ಮೂವರು ಬಾಲ ಕಾರ್ಮಿಕರು ಪತ್ತೆಯಾಗಿದ್ದು,, ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.

Advertisement

ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕ ಲಕ್ಷ್ಮೀಶ್, ಬಿ.ಆರ್.ಸಿ.ಸಂತೋಷ್‌ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಾಜಪ್ಪ, ಎ.ಸಿ.ಡಿ.ಪಿ.ಓ ವೀಣಾರವರು ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಬಸ್ ನಿಲ್ದಾಣದ ಮುಂಭಾಗದ ಅಂಗಡಿಗಳು, ಬಜಾರ್ ರಸ್ತೆ, ಬೈಪಾಸ್ ರಸ್ತೆಯ ಅಂಗಡಿಗಳು, ಪಂಚರ್ ಅಂಗಡಿ, ಸೈಕಲ್ ಶಾಪ್, ವರ್ಕ್ಶಾಪ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ  ವೇಳೆ ಮೆಡಿಕಲ್ ಸ್ಟೋರ್, ಪಂಚರ್ ಅಂಗಡಿ,  ಸೈಕಲ್ ಶಾಪ್‌ಗಳಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷ ಮೇಲ್ಪಟ್ಟ ಮೂವರು ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲಾಯಿತು.

ನಂತರ ಕಿಶೋರ ಕಾರ್ಮಿಕರ ಪೋಷಕರನ್ನು ಕರೆಸಿ, ಮತ್ತೊಮ್ಮೆ ಕೆಲಸಕ್ಕೆ ಕಳುಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಜೊತೆಯಲ್ಲಿ ಕಳುಹಿಸಿಕೊಟ್ಟು, ಶಾಲಾ-ಕಾಲೇಜಿಗೆ ಸೇರಿಸಬೇಕೆಂದು ಸೂಚಿಸಿದರು.

ಪರಾರಿಯಾದ ಬಾಲ ಕಾರ್ಮಿಕರು

ಕೆಲ ಅಂಗಡಿಗಳಿಗೆ ದಾಳಿ ಇಡುತ್ತಿದ್ದುದ್ದನ್ನು ಕಂಡ ಬಾಲ ಕಾರ್ಮಿಕರು ಪರಾರಿಯಾದರು. ಈ ವೇಳೆ ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಿಕ್ಕಿ ಬಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next