Advertisement

ಬುಲೆರೋದಿಂದ ಕೃಷ್ಣಾ ನದಿಗೆ ಬಿದ್ದ ಏಳು ಜನರ ರಕ್ಷಣೆ

11:41 PM Aug 16, 2019 | Team Udayavani |

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಜನವಾಡ ಬಳಿ ಶುಕ್ರವಾರ ಬುಲೆರೋ ವಾಹನ ಕೃಷ್ಣಾ ನದಿಗೆ ಉರುಳಿ ಬಿದ್ದಿದ್ದು, ಪ್ರಾಣಾಪಾಯದಲ್ಲಿದ್ದ ಅಥಣಿ ತಾಲೂಕಿನ ಏಳು ಜನರನ್ನು ರಕ್ಷಿಸಲಾಗಿದೆ. ಬುಲೆರೋದಲ್ಲಿ ಜಮಖಂಡಿಯಿಂದ ಅಥಣಿಗೆ 7 ಮಂದಿ ಹೊರಟಿದ್ದರು. ಹಿಪ್ಪರಗಿ-ಜನವಾಡ ಬಳಿ ಬಂದಾಗ ಚಾಲಕ ಪ್ರವಾಹದ ನೀರು ನೋಡುತ್ತ ವಾಹನ ಚಾಲನೆ ಮಾಡುತ್ತಿದ್ದ.

Advertisement

ಈ ವೇಳೆ, ನಿಯಂತ್ರಣ ತಪ್ಪಿ ವಾಹನ ನದಿಗೆ ಬಿತ್ತು. ವಾಹನದಲ್ಲಿದ್ದ ಏಳು ಮಂದಿ ನೀರಿನ ಸೆಳವಿಗೆ ಸಿಲುಕಿ ಪ್ರಾಣಾಪಾಯದಲ್ಲಿದ್ದರು. ಅದೇ ಮಾರ್ಗದಲ್ಲಿ ಹೊರಟಿದ್ದ ಜಮಖಂಡಿ ಕೃಷಿ ಇಲಾಖೆ ಅಧಿಕಾರಿ, ವಾಹನ ಚಾಲಕ ವಿನೋದ ರೆಡ್ಡಿ ಇದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದರು. ಜತೆಗೆ, ಅವರನ್ನು ರಕ್ಷಿಸಲು ಸ್ವತಃ ಮುಂದಾದರು.

Advertisement

Udayavani is now on Telegram. Click here to join our channel and stay updated with the latest news.

Next