Advertisement

ಅಲ್ಪ ಸಂಖ್ಯಾಕರಿಗೂ ಬಿಜೆಪಿಯಿಂದ ರಕ್ಷಣೆ

02:15 PM Oct 15, 2021 | Team Udayavani |

ವೇಣೂರು: ನಮ್ಮ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿ ತಲೆಯೆತ್ತುವಂತೆ ಮಾಡಿದ್ದಾರೆ. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಯೋಜನೆ ಯಂತೆ ದೇಶದಲ್ಲಿ ಅಲ್ಪಸಂಖ್ಯಾಕರಿಗೂ ಬಿಜೆಪಿ ರಕ್ಷಣೆ ನೀಡಿದೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಆರಂಬೋಡಿಯ ಗಿರಿ ಮೈದಾನದಲ್ಲಿ ಜರಗಿದ ಆರಂಬೋಡಿ ಗ್ರಾ.ಪಂ.ನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾದ ಬಿಜೆಪಿ ಕಾರ್ಯ ಕರ್ತರಿಗೆ ಹಾಗೂ ನೂತನವಾಗಿ ಆಯ್ಕೆ ಯಾದ ಅಧ್ಯಕ್ಷ, ಉಪಾಧ್ಯಕ್ಷರ ಅಭಿನಂದನ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ರಸಾದ್‌ ಆಸ್ರಣ್ಣ, ವಿಜಯಾ ರಮೇಶ್‌, ಪ್ರಶಾಂತ್‌ ಪಾರೆಂಕಿ, ಗಣೇಶ್‌ ಗೌಡ ನಾವರ, ಸೀತಾರಾಮ ಬೆಳಾಲು, ಮೋಹನ ಅಂಡಿಂಜೆ, ನಿತೀಶ್‌ ಗುಂಡೂರಿ, ಸುಂದರ ಹೆಗ್ಡೆ ಬಿ.ಇ., ಪ್ರಭಾಕರ ಪ್ರಭು, ಪ್ರವೀಣ್‌ಚಂದ್ರ ಜೈನ್‌, ಆಶಾ ಎಸ್‌. ಶೆಟ್ಟಿ, ಪ್ರಭಾಕರ ಎಚ್‌., ಅರುಣ್‌ ಕ್ರಾಸ್ತ, ನೇಮಯ್ಯ ಕುಲಾಲ್‌, ರತ್ನಕುಮಾರ್‌ ಚೌಟ, ಪಾಂಡುರಂಗ ಶೆಟ್ಟಿಗಾರ್‌, ಸುರೇಂದ್ರ ಶೆಟ್ಟಿ, ದೀಕ್ಷಿತಾ, ಗೀತಾ ಮತ್ತಿತರರು ಉಪಸ್ಥಿತರಿದ್ದರು. ಸತೀಶ್‌ ಮಠ ಸ್ವಾಗತಿಸಿದರು. ಸಂತೋಷ್‌ ಕುಲಾಲ್‌ ಸಿದ್ಧಕಟ್ಟೆ ನಿರೂಪಿಸಿದರು.

ಉಮೇಶ್‌ ಪಾಲ್ಯ ವಂದಿಸಿದರು. ಸಮ್ಮಾನ ಹರೀಶ್‌ ಪೂಂಜ, ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಚಂದ್ರಕಲಾ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಎಚ್‌., ಆಶಾ ಎಸ್‌. ಶೆಟ್ಟಿ, ಶಾರದಾ ಅವರನ್ನು ಸಮ್ಮಾನಿ ಸಲಾಯಿತು. ಗ್ರಾ.ಪಂ. ಮಾಜಿ ಸದಸ್ಯರು, ಹಿರಿಯ ಬಿಜೆಪಿ ಕಾರ್ಯಕರ್ತ ರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next