Advertisement
ಬಾರಾಕುಡಾ ಹೆಸರಿನ ಮೀನುಗಾರಿಕಾ ದೋಣಿ ನ. 7ರಂದು ಕೊಚ್ಚಿಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇದರಲ್ಲಿ ಕನ್ಯಾಕುಮಾರಿಯ ಒಂಬತ್ತು ಮಂದಿ, ಕೇರಳದ ಮೂವರು ಹಾಗೂ ಅಸ್ಸಾಮ್ನ ಓರ್ವ ಮೀನುಗಾರರಿದ್ದರು.
Related Articles
Advertisement
62 ಮಂದಿಯ ರಕ್ಷಣೆಡಿ. 1ರ ಬಳಿಕ ಒಖೀ ಚಂಡಮಾರುತದಿಂದ ತತ್ತರಿಸಿರುವ ಮೀನು ಗಾರಿಕಾ ದೋಣಿಗಳಿಂದ ಒಟ್ಟು 35 ಮಂದಿಯನ್ನು ಕೋಸ್ಟ್ ಗಾರ್ಡ್ ಹಡಗು ಅಮರ್ತ್ಯ ರಕ್ಷಿಸಿದೆ. ಮಳೆಗಾಲದ ಅವ ಧಿಯಲ್ಲಿ 27 ಮೀನು ಗಾರರನ್ನು ಸುರಕ್ಷಿತ ವಾಗಿ ಕರೆತರಲಾಗಿದೆ. ಚಂಡಮಾರುತದಿಂದ ಸಮುದ್ರ ಬಿರುಸು ಗೊಂಡಿದ್ದು ಕಮಾಂಡರ್ ಅನಿಕೇತನ್ ನೇತೃತ್ವದ ಅಮರ್ತ್ಯ ಹಡಗು ಅರಬೀ ಸಮುದ್ರ ದಲ್ಲಿ ಕಣ್ಗಾವಲು ನಿರತವಾಗಿದೆ. ಪ್ರಾಣ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಗರಿಷ್ಠವಾಗಿ ದೋಣಿಗಳನ್ನು, ಬಲೆಗಳನ್ನು ರಕ್ಷಿಸುವ ಪ್ರಯತ್ನ ವನ್ನು ಕೋಸ್ಟ್ ಗಾರ್ಡ್ ಮಾಡುತ್ತದೆ. ತುರ್ತು ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ಜಿಲ್ಲಾ ಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ.
– ಎಸ್.ಎಸ್. ದಸೀಲಾ, ಕಮಾಂಡರ್, ಕರ್ನಾಟಕ ಕೋಸ್ಟ್ ಗಾರ್ಡ್ ನ. 7ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದೆವು. ಡಿ. 2ರಂದು ಚಂಡಮಾರುತದಿಂದ ದೋಣಿ ಕೆಟ್ಟು ಮುಳುಗುವ ಹಂತ ತಲುಪಿತು. ತುರ್ತು ಸಂದೇಶ ಕಳಿಸಲು ಸಾಧ್ಯವಾಗಲಿಲ್ಲ. ಸಂಪರ್ಕ ಸಾಧನಗಳು ಹಾಳಾಗಿದ್ದರಿಂದ ಯಾವುದೇ ನೆರವು ಯಾಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ದೋಣಿಗೆ ನೀರು ನುಗ್ಗಲಾರಂಭಿಸಿದಾಗ ದೇವರ ಮೇಲೆ ಭಾರ ಹಾಕಿ ನೀರು ಖಾಲಿ ಮಾಡುತ್ತಾ ಬೇರೆ ದೋಣಿಯ ನಿರೀಕ್ಷೆಯಲ್ಲಿದ್ದೆವು. ಗಾಳಿಯ ರಭಸಕ್ಕೆ ದೋಣಿ ಮಲ್ಪೆ ಭಾಗದ ತೀರಕ್ಕೆ ಬಂದಾಗ ಮೊಬೈಲ್ ಸಂಪರ್ಕ ಸಾಧ್ಯವಾಗಿ ಕುಟುಂಬದವರಿಗೆ ಕರೆ ಮಾಡಿ ರಕ್ಷಿಸುವಂತೆ ಕೇಳಿಕೊಂಡೆವು.
– ಸ್ಟಾಲಿನ್, ಮೀನುಗಾರ