Advertisement

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

01:58 AM Oct 18, 2021 | Team Udayavani |

ಮಂಗಳೂರು: ದೇಶದಲ್ಲೇ ಮೊದಲೇ ಬಾರಿಗೆ ಸೀ ವೀಡ್‌ (ಸಮುದ್ರ ಕಳೆ) ಕೃಷಿ ಯೋಜನೆ ಜಾರಿಗೆ ತರಲಾಗಿದ್ದು, ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸೀ ವೀಡ್‌ ಆರ್ಥಿಕ ಪಾರ್ಕ್‌ ಅನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು.

Advertisement

ಕರ್ನಾಟಕದಲ್ಲೂ ಸೀ ವೀಡ್‌ ಕೃಷಿಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಡಾ|ಎಲ್‌ ಮುರುಗನ್‌ ಹೇಳಿದರು.

ಬೈಕಂಪಾಡಿಯಲ್ಲಿರುವ ಐಸ್‌ ಪ್ಲ್ರಾಂಟ್‌, ಕುಳಾಯಿಯ ಮಾಸ್ಟರ್‌ ಕೋಲ್ಡ್‌ ಸ್ಟೋರೇಜ್‌, ಬಂಗ್ರ ಕೂಳೂರಿ ನಲ್ಲಿ ಪಂಜರ ಮೀನು ಕೃಷಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಸೀ ವೀಡ್‌ ಎಕನಾಮಿಕ್‌ ಪಾರ್ಕ್‌
ಕಡಲ ಪಾಚಿಯನ್ನು (ಸೀ ವೀಡ್‌) ಔಷಧ, ಪೌಷ್ಟಿಕ ಆಹಾರ, ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದ್ದು, ದೇಶ ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಈ ಕೃಷಿ ಮುಖ್ಯವಾಗಿ ಮೀನುಗಾರ ಮಹಿಳೆಯರಿಗೆ ಉದ್ಯೋಗ ನೀಡುವುದಲ್ಲದೆ, ಆರ್ಥಿಕ ಸಶಕ್ತೀಕರಣಕ್ಕೂ ಕಾರಣ ವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಸೀ ವೀಡ್‌ ಎಕನಾಮಿಕ್‌ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಿದೆ ಎಂದರು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ದೇಶದಲ್ಲಿ ಹೊಸದಾಗಿ ಐದು ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣವನ್ನೂ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದು, ಶೀಘ್ರವೇ ಈ ಕೆಲಸ ಆರಂಭವಾಗಲಿದೆ. ಕೋವಿಡ್‌ ಅವಧಿಯಲ್ಲಿ ಪ್ರಧಾನಿ ಮೋದಿ ಅವರು 20 ಸಾವಿರ ಕೋ.ರೂ.ಗಳನ್ನು ಮೀನುಗಾರಿಕಾ ಕ್ಷೇತ್ರಕ್ಕೆ ಮೀಸಲಿರಿಸಿದ್ದಾರೆ. ಇದರಿಂದಾಗಿ ಮೀನುಕಾರಿಕಾ ಕ್ಷೇತ್ರದಲ್ಲಿ ಆಶಾಭಾವ ಮೂಡಿದೆ ಎಂದರು.

Advertisement

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಕೋವಿಡ್‌ ಇದ್ದರೂ ಮೀನು ಹಾಗೂ ಅದರ ಉತ್ಪನ್ನಗಳ ರಫ್ತು ಪ್ರಮಾಣ ಏರಿಕೆಯಾಗಿದೆ. ಒಳನಾಡು ಮೀನುಗಾರಿಕೆಯಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಮೀನು ಕೃಷಿಯಿಂದ ತೊಡಗಿ ರಫ್ತು ಮಾಡುವವರೆಗೂ ವಿವಿಧ ರೀತಿಯ ಘಟಕಗಳ ಸ್ಥಾಪನೆಗೆ ಶೇ.40ರಿಂದ 60ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

ಸಚಿವ ಎಸ್‌.ಅಂಗಾರ, ಶಾಸಕ ಡಾ| ವೈ.ಭರತ್‌ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್‌ ಕುಮಾರ್‌, ದ.ಕ.-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಉಪನಿರ್ದೇಶಕ (ಪ್ರಭಾರ) ಹರೀಶ್‌ ಕುಮಾರ್‌, ಕಾರ್ಪೋರೇಟರ್‌ ಕಿರಣ್‌ ಕುಮಾರ್‌, ಸುಮಿತ್ರಾ ಕರಿಯಾ ಉಪಸ್ಥಿತರಿದ್ದರು.

ಮೀನು ರಫ್ತಿಗೆ ಆದ್ಯತೆ: ಸಚಿವ ಅಂಗಾರ
ಸಚಿವ ಎಸ್‌. ಅಂಗಾರ ಮಾತನಾಡಿ, ರಾಜ್ಯದಲ್ಲಿ ಸೀ ವೀಡ್‌ ಕೃಷಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಸ್ಥಳಗಳನ್ನು ಗುರುತಿಸಲಾಗಿದೆ. ಕರಾವಳಿಯಲ್ಲಿ ಸಿಗುವ ಮಡೆಂಜಿ, ಮುಗುಡು ಮೀನನ್ನು ರಫ್ತು ಮಾಡುವ ಚಿಂತನೆ ನಡೆಸಲಾಗಿದ್ದು, ಇದರಿಂದ ಬೇಡಿಕೆ ಜತೆಗೆ ಮೀನುಗಾರರಿಗೆ ಉತ್ತಮ ಬೆಲೆಯೂ ಸಿಗುವ ಸಾಧ್ಯತೆಯಿದೆ. ಮೂಡು ಬಿದಿರೆಯ ನಿಡ್ಡೋಡಿಯಲ್ಲಿ ಸೀ ಫ‌ುಡ್‌ಪಾರ್ಕ್‌ ಕುರಿತಂತೆ ಸಾರ್ವಜನಿಕರಲ್ಲಿ ಇರುವ ಗೊಂದಲ ಪರಿಹರಿಸಿ ಯೋಜನೆ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next