Advertisement

ಬನಾರಸ್ ಸಿನಿಮಾ ಪ್ರಚಾರ; ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬನಾರಸ್ ಹೀರೋ

01:28 PM Oct 17, 2022 | Team Udayavani |

ಬನಾರಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಚಿತ್ರತಂಡ ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ನಾಯಕ ಝೈದ್ ಖಾನ್, ನಟಿ ಸೋನಲ್ ಮೊಂತೆರೋ ಹಾಗೂ ಕಲಾವಿದರ ತಂಡ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಮೂಲಕ ಚಿತ್ರದ ಕುರಿತ ಮಾಹಿತಿಗಳನ್ನು ಹಂಚಿಕೊಳ್ತಿದೆ.

Advertisement

ಇದೇ ಸಮಯದಲ್ಲಿ  ಆಯಾ ಭಾಗಗಳಲ್ಲಿ ಸಿಗುವಂಥ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ  ಕೊಟ್ಟು ಆಶೀರ್ವಾದ ಪಡೆಯುವ ಜೊತೆಗೆ ಸಿನಿ ಪ್ರಚಾರದಲ್ಲಿ ತೊಡಗಿದ್ದಾರೆ.  ಈ ಸಂದರ್ಭದಲ್ಲಿ ನಾಯಕಿ ಸೋನಲ್ ಹಾಗೂ ಸಾಂಪ್ರದಾಯಿಕ ಧಿರಿಸು ಧರಿಸಿದ ನಾಯಕ ನಟ ಝೈದ್ ಖಾನ್ ತಿರುಪತಿ ತಿರುಮಲೇಶ್ವರನ ದರ್ಶನ ಪಡೆದುಕೊಂಡಿದ್ದಾರೆ.

ತದ ನಂತರ ಝೈದ್ ಮತ್ತು ಸೋನಲ್ ನೆಲ್ಲೂರಿನ ಪ್ರಸಿದ್ಧ ದರ್ಗಾವೊಂದಕ್ಕೂ ಭೇಟಿ ನೀಡಿದ್ದಾರೆ. ಜಯತೀರ್ಥ ನಿರ್ದೇಶನದ ಬನಾರಸ್ ಈಗಾಗಲೇ ಒಂದಿಷ್ಟು ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದೆ. ಟ್ರೈಲರ್, ಮೋಷನ್ ಪೋಸ್ಟರ್, ಹಾಡುಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಪಂಚ ಭಾಷೆಗಳಲ್ಲೂ ತೆರೆಕಾಣುತ್ತಿರುವ ಕನ್ನಡ ಪ್ರಧಾನ ಬನಾರಸ್ ಚಿತ್ರದ ಮೇಲೆ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ನುರಿತ ಕಲಾವಿದರು, ತಾಂತ್ರಿಕ ವರ್ಗವನ್ನ ಒಟ್ಟುಗೂಡಿಸಿ , ತಿಲಕ್ ರಾಜ್ ಬಲ್ಲಾಳ್  ಅವರ ಅದ್ದೂರಿ ನಿರ್ಮಾಣದೊಂದಿಗೆ ತಯಾರದ ಬನಾರಸ್ ಇದೇ ನವೆಂಬರ್ 4 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.

ಚೊಚ್ಚಲ ಚಿತ್ರವಾದ್ರೂ ಈಗಾಗಲೇ ರಿಲೀಸ್ ಆದ ಝಲಕ್ ಗಳಲ್ಲೇ ಝೈದ್ ಮೋಡಿ ಮಾಡಿ, ಭರವಸೆಯನ್ನ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಸಿನಿರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ನಿರೀಕ್ಷೆ ಹುಟ್ಟುಹಾಕಿರುವ ಝೈದ್ ಖಾನ್   ಈ ಪ್ರಚಾರ ಕಾರ್ಯಗಳೊಂದಿಗೆ ಪರಭಾಷಾ ಪ್ರೇಕ್ಷಕರ ವಲಯದಲ್ಲಿಯೂ ಬನಾರಸ್ ಚರ್ಚೆ ಹುಟ್ಟು ಹಾಕುವಂತೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next