Advertisement

‘ಡೆಂಜರ್‌ ಝೋನ್‌’ ನಿರ್ಮಾಪಕರ ಗಲಾಟೆ : ಯುವಕನ ಬರ್ಬರ ಹತ್ಯೆ 

11:30 AM Mar 03, 2017 | |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ನ ಸೋಮೇಶ್ವರ  ನಗರದಲ್ಲಿ  ಯುವಕನೊಬ್ಬನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ನಡೆದಿದ್ದು,  ಡೇಂಜರ್‌ ಝೋನ್‌ ಚಿತ್ರದ ವಿಚಾರದಲ್ಲೇ ಈ ಕೊಲೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Advertisement

ಮನೋಜ್‌(25) ಎಂಬಾತನನ್ನು ಬರ್ಬರವಾಗಿ ಹತ್ಯೆಗೈಯಲಾಗಿದ್ದು, ಡೇಂಜರ್‌ ಝೋನ್‌ ಚಿತ್ರದ ನಿರ್ಮಾಪಕರ ನಡುವಿನ ಗಲಾಟೆಯಲ್ಲಿ ಈತನ ಹತ್ಯೆ ನಡೆದಿದೆ ಎನ್ನಲಾಗಿದೆ.

ನಸುಕಿನ 3 ಗಂಟೆ ಸುಮಾರಿಗೆ ಹತ್ಯೆ ನಡೆದಿದ್ದು, ಪಾನಗೋಷ್ಠಿ ನಡೆಸುತ್ತಿದ್ದ ವೇಳೆ  ಸಹನಿರ್ಮಾಪಕ ರಾಮು ಜೊತೆ ಇನ್ನೋರ್ವ ಸಹನಿರ್ಮಾಪಕ ಸ್ವರೂಪ್‌ಗೆ ವಿತರಣೆಯ ವಿಚಾರದಲ್ಲಿ ಜಗಳವಾಗಿದೆ.  ಈ ವೇಳೆ ಜೊತೆಯಲ್ಲಿದ್ದ  ನನ್ನು ಮಾರಕಾಯುಧಗಳಿಂದ ಕೊಚ್ಚಿ ಹತ್ಯೆಗೈಯಲಾಗಿದೆ ಎನ್ನಲಾಗಿದೆ. 
ರಾಮು ಸಹಚರರಿಂದ ಹತ್ಯೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next