Advertisement

ಹೌದ್ದೋ ಹುಲಿಯಾ…ಮತ್ತೆ ನೀನಾ ಸಿ.ಎಂ: ಸಿದ್ದರಾಮಯ್ಯ ಪರ ಅಭಿಮಾನಿಗಳಿಂದ ಘೋಷಣೆ

12:08 PM Jul 15, 2022 | Team Udayavani |

ವಿಜಯಪುರ: ಹೌದ್ದೋ ಹುಲಿಯಾ… ಮತ್ತೆ ನೀನಾ ಸಿ.ಎಂ… ಮುಂದಿನ‌ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ… ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಮುದ್ದೇಬಿಹಾಳ ತಾಲೂಕ ಜಟ್ಡಗಿ ಗ್ರಾಮದಲ್ಲಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

Advertisement

ಗುರುವಾರ ಯಾದಗಿರಿಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳುವ ಮಾರ್ಗ ಮಧ್ಯೆ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಬಿ.ಕೆ.ಬಿರಾದಾರ ‌ನಿವಾಸಕ್ಕೆ ಆಗಮಿಸಿದ್ದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೌದ್ದೋ ಹುಲಿಯಾ ಎಂದು‌ ಜೈಕಾರ ಹಾಕಿದ್ದಾರೆ.

ಸಿದ್ದರಾಮಯ್ಯ ಭೇಟಿಯಾಗಲು ದುಂಬಾಲು‌ ಬಿದ್ದ ಯುವಕರು, ತಮ್ಮ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಸ್ಥಳೀಯರು ಶಾಲು‌ ಹೊದಿಸಿ ಸನ್ಮಾನಿಸಿದರು.

ಇದನ್ನೂ ಓದಿ: ಮಸೀದಿ ಅಧ್ಯಕ್ಷ ಅಯುಬ್‌ ಹತ್ಯೆ: ಮಸೀದಿ ಅಧ್ಯಕ್ಷ ಸ್ಥಾನ, ಆಸ್ತಿ ವಿಚಾರಕ್ಕೆ ಕೃತ್ಯ

ಜಟ್ಟಗಿ ಗ್ರಾಮದ ಸ್ಥಳೀಯರೊಂದಿಗೆ ಚಹಾ ಸೇವಿಸಿ, ರಾತ್ರಿಯೇ  ಆಲಮಟ್ಟಿ ಬಳಿಯ ಶಾಸ್ತ್ರೀ ಜಲಾಶಯದ ಮಯೂರ ಕೃಷ್ಣಾ ಅತಿಥಿ ಗೃಹದತ್ತ ಪ್ರಯಾಣ ಬೆಳೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next