Advertisement

ಆರಗ ಪರ PSI ಹಗರಣ ರೂವಾರಿಗಳ ಪ್ರಚಾರ: ಕಿಮ್ಮನೆ

09:29 PM Apr 16, 2023 | Pranav MS |

ರಿಪ್ಪನ್‌ಪೇಟೆ: ಪಿಎಸ್‌ಐ ಹಗರಣದ ರೂವಾರಿಗಳಾದ ದಿವ್ಯ ಹಾಗರಗಿ, ಸ್ಯಾಂಟ್ರೋ ರವಿ ಮತ್ತು ಎನ್‌.ಡಿ. ಪಾಟೀಲ್‌ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ ಆರೋಪಿಸಿದ್ದಾರೆ.

Advertisement

ಸಮೀಪದ ಹುಂಚಾ ಹೋಬಳಿ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜಡ್ಡು, ತಳಲೆ, ಕಗ್ಗಚ್ಚಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂವರು ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿಕೊಂಡಿದ್ದು ಆರಗ ಜ್ಞಾನೇಂದ್ರ ಪರ ಪ್ರಚಾರ ನಡೆಸುತ್ತಿದ್ದಾರೆ. ಕೋಟ್ಯಂತರ ರೂ. ಹಣವಿರುವ ಅವರ ಎದುರು ನಾನು ಖಾಲಿ ಜೇಬಿನವ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅವರಿಗೆ ಹಗರಣ ಮಾಡಿದವರೇ ಶಕ್ತಿ. ನನಗೆ ಕಾರ್ಯಕರ್ತರೇ ಶಕ್ತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next