Advertisement

ಪ್ರಿಯಾಂಕ ಖರ್ಗೆ ಮಂಚದ ಹೇಳಿಕೆಗೆ ಸಂಸದ ಜಿಗಜಿಣಗಿ ಕಿಡಿ

06:13 PM Aug 12, 2022 | Team Udayavani |

ವಿಜಯಪುರ: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ ಖರ್ಗೆ ಉದ್ಯೋಗಕ್ಕಾಗಿ ಯುವತಿರು ಮಂಚಕ್ಕೆ ಏರಬೇಕಿದೆ ಎಂದಿರುವ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಅವರ ಅಪ್ಪನ‌ ಕಾಲದಲ್ಲೇನೂ ಭ್ರಷ್ಟಾಚಾರ ನಡೆಯಲೇ ಇಲ್ಲವೇ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಿಯಾಂಕ ಮೆದುಳು ಹಾಗೂ ನಾಲಿಗೆಗೆ ಸಂಪರ್ಕ ಇಲ್ಲದ ವ್ಯಕ್ತಿಯಂತೆ ಮಾತನಾಡಿದ್ದಾರೆ ಎಂದರು.

ನಾನು ರಾಜ್ಯ ರಾಜಕಾರಣಕ್ಕೆ ಬರಬೇಕೋ, ಕೇಂದ್ರದಲ್ಲಿ ಇರಬೇಕೋ, ಮನೆಯಲ್ಲಿ ಇರಬೇಕೋ ಎಂಬುದನ್ನು ಪಕ್ಷ‌ ನಿರ್ಧರಿಸುತ್ತದೆ ಎಂದು ಪುನರುಚ್ಚರಿಸಿ, ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಕುರಿತು ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ನನಗೆ ಈ ವರೆಗೆ ಎಲ್ಲವನ್ನೂ ನೀಡಿದೆ. ದಲಿತ ಮುಖ್ಯಮಂತ್ರಿ ವಿಷಯವೂ ಪಕ್ಷದ ತೀರ್ಮಾನವೇ ಆಗಿರಲಿದೆ. ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ತೀರ್ಮಾನ. ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ್ ದೆಹಲಿ ನಾಯಕರ ಭೇಟಿ ವಿಷಯ ದೆಹಲಿಯಲ್ಲೇ ಇದ್ದರೂ ನನಗೇನೂ ತಿಳಿಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next