Advertisement

ಮತ್ತೆ ಕಸಬರಿಕೆ ಎತ್ತಿದ ಪ್ರಿಯಾಂಕಾ!

11:18 PM Oct 09, 2021 | Team Udayavani |

ಲಕ್ನೋ: ಲಖೀಂಪುರ ಘಟನೆ ಬಳಿಕ ಪೊಲೀಸ್‌ ವಶದಲ್ಲಿದ್ದಾಗ ಅತಿಥಿಗೃಹವನ್ನು ಗುಡಿಸಿ ಸುದ್ದಿಯಾಗಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಮತ್ತೆ ಕಸಬರಿಕೆ ಹಿಡಿದಿದ್ದಾರೆ!

Advertisement

ಶನಿವಾರ ಲಕ್ನೋದ ದಲಿತ ಸಮುದಾಯದ ಕಾಲನಿಗೆ ದಿಢೀರ್‌ ಭೇಟಿ ನೀಡಿದ ಅವರು, ಅಲ್ಲಿನ ಮಹಿಳೆಯರೊಂದಿಗೆ ತಾವೂ ಕಸ ಗುಡಿಸಿದ್ದಾರೆ.

“ಪ್ರಿಯಾಂಕಾ ಅವರು ಕಸ ಗುಡಿಸಲಷ್ಟೇ ಅರ್ಹರಾಗುವಂತೆ ಜನರು ಮಾಡುತ್ತಾರೆ’ ಎಂದು ಇತ್ತೀಚೆಗೆ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಪ್ರಿಯಾಂಕಾ ದಲಿತ ಕಾಲನಿಗೆ ಭೇಟಿ ನೀಡಿದ್ದಾರೆ. ಜತೆಗೆ, “ಸಿಎಂ ಯೋಗಿ ಅವರು ಇಂಥ ಹೇಳಿಕೆ ನೀಡುವ ಮೂಲಕ ನನಗೆ ಮಾತ್ರ ಅವಮಾನ ಮಾಡಿಲ್ಲ, ಸಫಾಯಿ ಕರ್ಮಚಾರಿಗಳಾಗಿ ದುಡಿಯುವ ಕೋಟಿಗಟ್ಟಲೆ ಸೋದರ- ಸೋದರಿಯರಿಗೆ ಅವಮಾನ ಮಾಡಿ

ದ್ದಾರೆ. ಕಸಬರಿಕೆಯು ಸರಳತೆ ಮತ್ತು ಸ್ವಾಭಿಮಾನದ ಸಂಕೇತ. ದೇಶದ ಕೋಟ್ಯಂತರ ನೈರ್ಮಲ್ಯ ಕಾರ್ಮಿಕರು ಪ್ರತೀ ದಿನ ಕಸಬರಿಕೆಯಿಂದ ಕೊಳಕನ್ನು ಸ್ವಚ್ಛ ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಶಿಕ್ಷಕ, ಪದವೀಧರ ಕ್ಷೇತ್ರಗಳ ಚುನಾವಣೆ: ಬಿಜೆಪಿ ಉಸ್ತುವಾರಿಗಳ ನೇಮಕ

Advertisement
Advertisement

Udayavani is now on Telegram. Click here to join our channel and stay updated with the latest news.

Next