Advertisement

ಕಾಂಗ್ರೆಸ್‌ ಪುನಶ್ಚೇತನಕ್ಕೆ ಪ್ರಿಯಾಂಕಾ “ತ್ರಿಸೂತ್ರ’

10:29 AM May 01, 2022 | Team Udayavani |

ಲಕ್ನೋ: 2012ರ ವಿಧಾನಸಭಾ ಚುನಾವಣೆ ನಂತರ ಉತ್ತರಪ್ರದೇಶದಲ್ಲಿ ಕುಸಿಯುತ್ತ ಸಾಗಿರುವ ಕಾಂಗ್ರೆಸ್‌ ಈಗ ತೀರಾ ಕೆಳಮಟ್ಟಕ್ಕೆ ತಲುಪಿದೆ.

Advertisement

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ್ದು ಕೇವಲ 2 ಸ್ಥಾನ ಮಾತ್ರ. ಇದನ್ನು ಸರಿಪಡಿಸಲು ಆ ರಾಜ್ಯದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮೂರು ಸಲಹೆಗಳನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ನೀಡಿದ್ದಾರೆನ್ನಲಾಗಿದೆ.

ಮೊದಲನೆಯದಾಗಿ ಯುಪಿ ಕಾಂಗ್ರೆಸ್‌ ಸಮಿತಿಯನ್ನು ಪುನರ್ರಚನೆ ಮಾಡುವುದು, ಹಿರಿಯ ನಾಯಕರೊಬ್ಬರನ್ನು ಇದಕ್ಕೆ ಉಸ್ತುವಾರಿಯನ್ನಾಗಿ ನೇಮಿಸುವುದು. ಎರಡನೆಯದಾಗಿ, 4-5 ಕಾರ್ಯಾಧ್ಯಕ್ಷರನ್ನು ನೇಮಿಸಿ ಸಂಘಟನೆಯನ್ನು ಬಲಪಡಿಸುವುದು, ಇವರ ಮೇಲ್ವಿಚಾರಣೆಗೆ ರಾಜ್ಯಾಧ್ಯಕ್ಷರ ನೇಮಕ. ಮೂರನೇಯದಾಗಿ, ಉತ್ತರಪ್ರದೇಶವನ್ನು ಪಶ್ಚಿಮ, ಪೂರ್ವ, ಅವಧ್‌, ಎಂಬ ನಾಲ್ಕು ವಲಯಗಳನ್ನಾಗಿ ವಿಭಾಗಿಸಿ ಅಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸುವುದು.

ಸದ್ಯ ಈ ಪ್ರಸ್ತಾವವನ್ನು ಸೋನಿಯಾ ಪರಿಶೀಲಿಸುತ್ತಿದ್ದಾರೆಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next