Advertisement
ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಮುದ್ರಣ ತಂತ್ರಜ್ಞಾನ ಒಂದು ಅವಲೋಕನ’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬ ಸಂಭ್ರಮವನ್ನು ಆ.29ರಂದು ಹಮ್ಮಿಕೊಳ್ಳಲಾಗಿದೆ.
Related Articles
Advertisement
ಮುದ್ರಣಕಾರರು ನೂತನ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಬೇಕು. ಪುಸ್ತಕ ಮಾತ್ರವಲ್ಲದೇ ಇತ್ತೀಚಿಗೆ ಆಡಿಯೋ ಪುಸ್ತಕ, ಇ-ಪುಸ್ತಕಗಳೂ ಬರುತ್ತಿವೆ. ಪ್ರಕಾಶಕರು ಹಾಗೂ ಲೇಖಕರು ಪುಸ್ತಕ ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪ್ರಬಲವಾಗಿ ಬಳಸಿಕೊಳ್ಳಬೇಕು ಎಂದು ಛಂದ ಪುಸ್ತಕ ಪ್ರಕಾಶಕ ವಸುಧೇಂದ್ರ ಸಲಹೆ ನೀಡಿದರು.
“ಮುದ್ರಣ ತಂತ್ರಜ್ಞಾನ ಬೆಳೆದು ಬಂದ ಹಾದಿ’ ಕುರಿತು ಕನ್ನಡ ವಿವಿ ಪ್ರಸಾರಾಂಗದ ಕೆ.ಎಲ್.ರಾಜಶೇಖರ್ ಹಾಗೂ “ಪುಸ್ತಕ ಸೊಗಸು ಮತ್ತು ನವ ತಂತ್ರಜ್ಞಾನ’ ಕುರಿತು ವಸುಧೇಂದ್ರ ಉಪನ್ಯಾಸ ನೀಡಿದರು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಮೋಹನ್ಕುಮಾರ್ ಉಪಸ್ಥಿತರಿದ್ದರು.