Advertisement

ಪ್ರಧಾನಿ ಸಂದೇಶದಂತೆ ದೇಶ ಸೇವೆ ಸಂಕಲ್ಪ: ಬಿ.ಎಲ್‌. ಸಂತೋಷ್‌

09:59 PM Aug 15, 2022 | Team Udayavani |

ಗೌರಿಬಿದನೂರು: ಪ್ರಧಾನಿ ಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ 75ನೇ ಸ್ವಾತಂತ್ರೋತ್ಸವ ಸಂಭ್ರಮ ಆಚರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

Advertisement

ಬೆಂಗಳೂರಿನಿಂದ ಸೂಪರ್‌ ಬೈಕ್‌ಗಳಲ್ಲಿ ವಿದುರಾಶ್ವತ್ಥಕ್ಕೆ ಬೈಕ್‌ ರ್‍ಯಾಲಿಯಲ್ಲಿ ಆಗಮಿಸಿದ ಅವರು ಜನತೆಯನ್ನುದ್ದೇಶಿಸಿ ಮಾತನಾಡಿ, ಮನೆ ಮನೆಗಳ ಮೇಲೆ ಧ್ವಜ ಹಾರಿಸಿರುವುದು ಹೆಮ್ಮೆಯ ವಿಷಯ ಎಂದರು.

ಬಳಿಕ ಸಮರ್ಥ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದುರಾಶ್ವತ್ಥ ಸ್ವಾತಂತ್ರ್ಯ ಸಂಗ್ರಾಮ ಕ್ಷೇತ್ರ. ಇಲ್ಲಿ 32 ಜನ ಬಲಿದಾನ ಮಾಡಿದ್ದಾರೆ. ಧ್ವಜ ಸತ್ಯಾಗ್ರಹದ ವೇಳೆ ಬ್ರಿಟಿಷ್‌ ಪೊಲೀಸರಿಂದ 32 ದೇಶಭಕ್ತ ನಾಗರಿಕರ ಬಲಿದಾನ ವಾಗಿದೆ. ಈ ಬಲಿದಾನಗಳ ಭೂಮಿಯಲ್ಲಿ ಭಾಗವಹಿಸಲು ನನಗೆ ಹೆಮ್ಮೆಯೆನಿಸುತ್ತಿದೆ ಎಂದರು.

ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತವನ್ನು ಕಟ್ಟಲು ಶ್ರಮಿಸಬೇಕೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next