ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರಾಜಕೀಯ ಬಿಕ್ಕಟ್ಟಿನ ನಡುವೆಯೂ ಉದ್ಘಾಟನ ಸಮಾರಂಭಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಅಭಿನಂದನೆಗಳು. ಅಭಿವೃದ್ಧಿಗೆ ನೀವು ಒತ್ತು ನೀಡಿದ್ದೀರಿ,” ಎಂದು ಶ್ಲಾ ಸಿದರು. “ರೈಲ್ವೇ ಸಚಿವರು ರಾಜಸ್ಥಾನದವರು. ರೈಲ್ವೇ ಮಂಡಳಿ ಅಧ್ಯಕ್ಷರು ಕೂಡ ರಾಜಸ್ಥಾನದವರು. ಹೀಗಾಗಿ ಗೆಹ್ಲೋಟ್ ಅವರೇ ನಿಮ್ಮ ಬಳಿ ಎರಡೆರಡು ಲಡ್ಡು(ಸಿಹಿ)ಗಳಿವೆ. ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಿದ್ದೀರಿ. ನನ್ನ ಮೇಲಿನ ನಿಮ್ಮ ನಂಬಿಕೆಯೇ ನಮ್ಮ ಸ್ನೇಹದ ಶಕ್ತಿ. ಒಬ್ಬ ಸ್ನೇಹಿತನಾಗಿ, ನನ್ನ ಮೇಲೆ ಈ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ,” ಎಂದು ಹೇಳಿದರು.
Advertisement
ರಾಜಸ್ಥಾನದ ಮೊದಲ Vande Bharat ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ
12:14 AM Apr 13, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.