Advertisement

Electoral bond ಹಗರಣಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಮಾಸ್ಟರ್‌ ಮೈಂಡ್‌: ರಾಹುಲ್‌

01:00 AM Apr 16, 2024 | Team Udayavani |

ಹೊಸದಿಲ್ಲಿ: ಚುನಾವಣೆ ಬಾಂಡ್‌ ಯೋಜನೆಯು ಜಗತ್ತಿನ ಅತಿದೊಡ್ಡ ಸುಲಿಗೆ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಇದರ ಮಾಸ್ಟರ್‌ವೆುçಂಡ್‌! ಈಗ ಅವರು ಸಿಕ್ಕಿಬಿದ್ದಿರುವ ಕಾರಣಕ್ಕಾಗಿ ಮಾಧ್ಯಮದ ಮುಂದೆ ಹೋಗಿ ಸಂದರ್ಶನ ನೀಡುತ್ತಿ ದ್ದಾರೆ. ಹೀಗೆಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಎನ್‌ಐಎ ಸುದ್ದಿ ಸಂಸ್ಥೆಗೆ ಪ್ರಧಾನಿ ಸಂದರ್ಶನ ನೀಡಿದ್ದು, ಅದರಲ್ಲಿ ಚುನಾವಣೆ ಬಾಂಡ್‌ಗಳ ಬಗ್ಗೆ ವಿಪಕ್ಷಗಳು ಸುಳ್ಳು ಹೇಳುತ್ತಿವೆ. ಕಪ್ಪು ಹಣವನ್ನು ನಿಗ್ರಹಿ ಸಲು ಬಾಂಡ್‌ ನೀತಿ ರೂಪಿಸಲಾಗಿತ್ತು. ಆ ಸತ್ಯ ಬಯ ಲಾದಾಗ ಎಲ್ಲರೂ ವಿಷಾದ ಪಡುತ್ತಾರೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ರಾಹುಲ್‌ ಗಾಂಧಿ “ಚುನಾವಣೆ ಬಾಂಡ್‌ಗಳ ದಿನಾಂಕ ಗಮನಿಸಿದರೆ ಸಾಕು ಸತ್ಯ ಬಯಲಾಗುತ್ತದೆ. ಯಾವಾಗ ಯಾವ ಸಂಸ್ಥೆಯ ವಿರುದ್ಧ ಇ.ಡಿ, ಸಿಬಿಐ ದಾಳಿ ನಡೆಸುತ್ತದೆಯೋ ಕೂಡಲೇ ಬಿಜೆಪಿಗೆ ಬಾಂಡ್‌ ಹಣ ಹೋಗುತ್ತದೆ’ ಎಂದರು. ಯಾವ ಸಂಸ್ಥೆಗೆ ಕೇಂದ್ರದಿಂದ ಯೋಜನೆಗಳು ಮಂಜೂರಾಗು ತ್ತವೆಯೋ ಅದೇ ಸಂಸ್ಥೆಗಳು ಬಾಂಡ್‌ಗಳನ್ನು ಖರೀದಿಸಿ ಬಿಜೆಪಿಗೆ ನೀಡುತ್ತವೆ. ಇದು ಅತಿದೊಡ್ಡ ಹಗರಣ. ಪ್ರಧಾನಿಯವರೇ ಅದರ ಮಾಸ್ಟರ್‌ ಮೈಂಡ್‌ ಎಂದು ಆರೋಪಿಸಿದ್ದಾರೆ.

ಕಾಪ್ಟರ್‌ ತಪಾಸಣೆ: ಚುನಾವಣೆ ಪ್ರಚಾರಕ್ಕೆಂದು ತಮಿಳುನಾಡಿನಿಂದ ಹೊರಟಿದ್ದ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ಅನ್ನು ಟೇಕಾಫ್ ಆಗುವ ಮುನ್ನವೇ ಚುನಾವಣೆ ಅಧಿಕಾರಿಗಳು ನೀಲಗಿರಿ ಯಲ್ಲಿ ಸೋಮವಾರ ತಪಾಸಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next