Advertisement

ಏ.13ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ

01:27 PM Apr 03, 2019 | Nagendra Trasi |

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರು ಕಡೆ ಪ್ರಚಾರ ನಡೆಸಿದ್ದಾರೆ. ಏ.13ರಂದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Advertisement

ಏ.12ರ ಬದಲು ಏ.13ರಂದು ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿದ್ದು, ಈ ಭಾಗದ 6 ಶಕ್ತಿ ಕೇಂದ್ರದಿಂದ 16 ಸಾವಿರ ಮಂದಿ ಆಗಮಿಸಬೇಕೆಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ವಿನಂತಿಸಿಕೊಂಡಿದ್ದಾರೆ. ಯುವಕರ ಉತ್ಸಾಹ ಮೋದಿ ನೇತೃತ್ವದ ಸರಕಾರಕ್ಕೆ ಪೂರಕವಾಗಿದೆ. ಭ್ರಷ್ಟಾಚಾರ, ಭಯೋತ್ಪಾದನೆ ರಹಿತವಾದ ಭಾರತದ ಕನಸು ಮೋದಿ ಆಡಳಿತದಿಂದ ಸಾಕಾರಗೊಳ್ಳುತ್ತಿದೆ. ನುಡಿದಂತೆ ನಡೆದ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ನಳಿನ್ ಹೇಳಿದರು.

ಏಪ್ರಿಲ್ 8ರ ಮಧ್ಯಾಹ್ನ 1ಗಂಟೆಗೆ ಚಿತ್ರದುರ್ಗ, ಸಂಜೆ 3ಗಂಟೆಗೆ ಮೈಸೂರು. ಏ.13ರಂದು ಬೆಳಗ್ಗೆ ಮಂಗಳೂರು, ಸಂಜೆ ಬೆಂಗಳೂರು, ಏ.18ರ ಬೆಳಗ್ಗೆ ಚಿಕ್ಕೋಡಿ, ಸಂಜೆ ಗಂಗಾವತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next