Advertisement

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

09:13 PM Dec 02, 2021 | Team Udayavani |

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ನಡತೆ ನೋಡಿ ಕಲಿಯಲಿ. ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಅದೆಷ್ಟು ಗೌರವ ಕೊಟ್ಟರು ಎಂಬುದನ್ನು ತಿಳಿದುಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಯಿಗೆ ಬಂದಂತೆ ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಮತ್ತು ಮುಖಂಡರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಅವರಿಗೆ ನಾಗರಿಕತೆಯ ಪಾಠದ ಅವಶ್ಯಕತೆ ಇದೆ ಎಂದರು.

ಗೋಹತ್ಯೆ ನಿಷೇಧ ಕಾನೂನು ಇನ್ನಷ್ಟು ಕಠಿಣ ಮಾಡುವ ಅಗತ್ಯ ಇದೆ ಎನಿಸಿದರೆ ಮಾರ್ಪಾಡು ಮಾಡಲಾಗುವುದು. ಕಾಂಗ್ರೆಸ್‌ಗೆ ಜೀವಂತಿಕೆ ಇಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆಂದರೆ ಸತ್ತು ಹೋಗಿದೆ ಎಂದರ್ಥ. ಬಿಜೆಪಿ ನಾಶ ಮಾಡಲು ನೆಹರು, ಇಂದಿರಾ, ರಾಜೀವ್‌ ಗಾಂಧಿ  ಕೈಯಲ್ಲೇ ಆಗಲಿಲ್ಲ. ಈಗ ರಾಹುಲ್‌ ಗಾಂ ಧಿಯಲ್ಲೂ ಆಗೋದೇ ಇಲ್ಲ.

ಇದನ್ನೂ ಓದಿ:ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ಬೆಳೆದಿದ್ದು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next