Advertisement

ಇಂದಿನಿಂದ ಚಿಣ್ಣರೂ ಶಾಲೆಗೆ; ಪೂರ್ವ ಪ್ರಾಥಮಿಕ ತರಗತಿ,ಅಂಗನವಾಡಿ ಆರಂಭ

12:23 AM Nov 08, 2021 | Team Udayavani |

ಬೆಂಗಳೂರು: ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ಭೌತಿಕ ತರಗತಿಗಳು ಹಾಗೂ ಅಂಗನವಾಡಿಗಳು ಸೋಮವಾರ ಆರಂಭವಾಗಲಿವೆ.

Advertisement

ಕೊರೊನಾ ಇಳಿಮುಖವಾಗುತ್ತಿರುವ ಕಾರಣ ರಾಜ್ಯದಲ್ಲಿ 1ರಿಂದ 10ರ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಈಗಾಗಲೇ ಆರಂಭವಾಗಿವೆ. ಅಂತೆಯೇ ಸೋಮವಾರ ದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ವರೆಗೆ ಪೂರ್ವ ಪ್ರಾಥಮಿಕ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ. ಪೋಷಕರಿಂದ ಅನುಮತಿ ಪತ್ರ ಕಡ್ಡಾಯ .

ಮಾರ್ಗಸೂಚಿಗಳೇನು?
ಸೋಂಕು ನಿವಾರಕಗಳಿಂದ ಕಡ್ಡಾಯವಾಗಿ ಕೊಠಡಿ  ಶುದ್ಧೀ ಕರಿಸಬೇಕು. ಮಕ್ಕಳು ಮನೆಯಿಂದಲೇ ಉಪಾಹಾರ, ಕುಡಿ  ಯುವ ನೀರು ತರಬೇಕು.ಅವಶ್ಯಇದ್ದಲ್ಲಿ ಶಾಲೆಗಳಲ್ಲಿ ಕುಡಿ ಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಮನೆಯ ಸದ ಸ್ಯರಿಗೆ ಸೋಂಕು ಕಂಡು ಬಂದಲ್ಲಿ ಮಗುವನ್ನು ಶಾಲೆಗೆ ಕರೆ ತರದಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಮಗುವಿಗೆ ಸೋಂಕು ದೃಢಪಟ್ಟಿದ್ದರೆ ಉಳಿದ ಮಕ್ಕಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿ  ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next