Advertisement
ಸತತ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗೆ ಕೊಳೆ ರೋಗಬಾಧೆ ಕಾಡುತ್ತಿದೆ. ದಸರಾ, ದೀಪಾವಳಿ ಸೀಸನ್ನಲ್ಲಿ ಬೆಳೆಗೆ ರೋಗ ಕಾಡುತ್ತಿರುವುದರಿಂದ ಮಾಡಿದ ಖರ್ಚು ಕೂಡ ಬಾರದ ಸ್ಥಿತಿ ಎದುರಾಗಿದೆ. ಆದರೀಗ ಪ್ರತಿ ಕೆ.ಜಿಗೆ 40-50 ರೂ. ದರಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬ-ಹರಿದಿನ, ಕಾರ್ಯಕ್ರಮ, ಸಮಾರಂಭಗಳು ನಡೆಯದ್ದರಿಂದ ಕೆ.ಜಿಗೆ 150 ರೂ. ಅಧಿಕ ದಾಟಿದ ಬೆಲೆ ಸೋಂಕಿನ ಪ್ರಕರಣ ತಗ್ಗಿದ ಹಿನ್ನೆಲೆ ಈ ಬಾರಿ ಚೆಂಡು ಹೂವಿಗೆ ಬೆಲೆ ಕುಸಿದಿದೆ.
Related Articles
Advertisement
ಇದನ್ನೂ ಓದಿ: ಸರ್ಕಾರಿ ಡಿಗ್ರಿ ಕಾಲೇಜಿಗೆ ಸವಾಲಾದ ದಾಖಲಾತಿ
ಇನ್ನು ಅಲ್ಪಸ್ವಲ್ಪ ಚೆಂಡು ಹೂವು ಕೈಗೆ ಬರುತ್ತಿದ್ದು, ಮೋಡ ಕವಿದ ವಾತಾವರಣ ಹಿನ್ನೆಲೆ ಮತ್ತೆ ಚಿಂತೆ ಹುಟ್ಟಿಸಿದೆ. ಕೊಳೆ ರೋಗ ಬಾಧೆಯಿಂದ ತತ್ತರಿಸಿದ ರೈತರಿಗೆ ತಾಲೂಕು ಆಡಳಿತವೇ ಪರಿಹಾರ ನೀಡಬೇಕೆನ್ನುವ ಕೂಗು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿದೆ. ಹಲವು ಗ್ರಾಮಗಳಲ್ಲಿ ರೈತರು ಚೆಂಡು ಹೂವು ಬೆಳೆದಿದ್ದಾರೆ. ಸತತ ಮಳೆಯಿಂದ ಬೆಳೆಗೆ ಕೊಳೆ ರೋಗಬಾಧೆ ಆವರಿಸಿದೆ. ಈ ಬಾರಿ ಬೆಲೆ ಇಲ್ಲದ ಕಾರಣ ಬೆಳೆಗಾರರಿಗೆ ಆತಂಕ ತಂದಿದೆ. -ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಈ ಬಾರಿ ಸತತ ಮಳೆಯಿಂದ ಚೆಂಡು ಹೂವಿಗೆ ಕೊಳ ರೋಗಬಾಧೆ ಕಾಡುತ್ತಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏಕಾಏಕಿ ಬೆಲೆ ಕುಸಿದಿದೆ. ಹಾಕಿದ ಹಣವೂ ಬಾರಲಾರದ ಸ್ಥಿತಿ ಎದುರಾಗಿದೆ. -ಅಂಬರೇಶ ಅರಕೇರಾ, ಚೆಂಡು ಹೂ ಬೆಳೆಗಾರ
-ನಾಗರಾಜ ತೇಲ್ಕರ್