Advertisement

ರಾಷ್ಟ್ರಪತಿ ಚುನಾವಣೆ: ಜೂ.21ರ ಸಭೆಗೆ ಮಮತಾ ಬ್ಯಾನರ್ಜಿ ಗೈರು?

10:28 AM Jun 20, 2022 | Team Udayavani |

ಕೋಲ್ಕತ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ರಾಷ್ಟ್ರ ಮಟ್ಟದಲ್ಲಿ ಭಾರೀ ಯತ್ನಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜೂ. 21ರಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಕರೆದಿರುವ ಸಭೆಗೆ ಪ.ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಹುತೇಕ ಗೈರಾಗಲಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಆ ದಿನಾಂಕದಂದು ಬೇರೆ ಕಾರ್ಯಕ್ರಮವಿರುವುದರಿಂದ ತಾನು ಬರುವುದಿಲ್ಲ, ಆದರೆ ತನ್ನ ಪಕ್ಷದಿಂದ ಪ್ರತಿನಿಧಿಯೊಬ್ಬರು ಬರುತ್ತಾರೆಂದು ಮಮತಾ ತಿಳಿಸಿದ್ದಾರೆಂದು ಟಿಎಂಸಿ ನಾಯಕರೊಬ್ಬರು ಹೇಳಿದ್ದಾರೆ.

ವಿಶೇಷವೆಂದರೆ ಜೂ.15ರಂದು ದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಸಭೆ ಕರೆದಿದ್ದರು. ಅದಕ್ಕೆ ಶರದ್‌ ಪವಾರ್‌ ಹಾಜರಾಗಿದ್ದರು. ರಾಷ್ಟ್ರಪತಿಗಳ ಚುನಾವಣೆಗೆ ಬಿಜೆಪಿಯೇತರ ಅಥವಾ ಎನ್‌ಡಿಎಯೇತರ ಸರ್ವಸಮ್ಮತ ಅಭ್ಯರ್ಥಿಯನ್ನು ಹಾಕುವುದು ಈ ಸಭೆಯ ಉದ್ದೇಶ.

ಮಮತಾ ಸಭೆಯಲ್ಲಿ 17 ಪಕ್ಷಗಳು ಭಾಗವಹಿಸಿದ್ದವು. ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಎನ್‌ಸಿಪಿ, ಡಿಎಂಕೆ, ಆರ್‌ಜೆಡಿ, ಎಡಪಕ್ಷಗಳು ಭಾಗವಹಿಸಿದ್ದವು. ಆಮ್‌ ಆದ್ಮಿ, ಶಿರೋಮಣಿ ಅಕಾಲಿದಳ, ಟಿಆರ್‌ಎಸ್‌, ಬಿಜೆಡಿ ಹೋಗಿರಲಿಲ್ಲ. ಈ ಪಕ್ಷಗಳು ಯಾರಿಗೆ ಬೆಂಬಲು ನೀಡುತ್ತವೆ. ತಮ್ಮದೇ ಇನ್ನೊಬ್ಬ ಅಭ್ಯರ್ಥಿಯನ್ನು ನಿಲ್ಲಿಸುತ್ತವೆಯೇ ಎಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next