Advertisement

ರಾಷ್ಟ್ರಪತಿ ಚುನಾವಣೆ: ಔಪಚಾರಿಕಕ್ಕೆ ಮಾತ್ರ ಯಶವಂತ ಸಿನ್ಹಾ ಪ್ರವಾಸ

08:39 PM Jul 10, 2022 | Team Udayavani |

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಈ ತಿಂಗಳ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿ ಯಶವಂತ ಸಿನ್ಹಾ ಈಗ ದೇಶ ಸಂಚಾರ ಕೈಗೊಂಡಿದ್ದಾರೆ. ಉದ್ದೇಶ-ಎಲ್ಲಾ ರಾಜ್ಯಗಳ ರಾಜಧಾನಿಗೆ ತೆರಳಿ ಪ್ರಮುಖ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರುವುದು. ಆದರೆ, ಅವರೊಬ್ಬರೇ ಪ್ರಚಾರ ಕೈಗೊಳ್ಳುತ್ತಿದ್ದಾರೆಯೇ ಹೊರತು, ಅವರ ಜತೆಗೆ ಸಿನ್ಹಾ ಅವರೇ ಕಣಕ್ಕೆ ಇಳಿಯಬೇಕು ಎಂದು ಘೋಷಣೆ ಮಾಡಿದ ನಾಯಕರು ಯಾರೂ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ.

Advertisement

ಮತ್ತೊಂದು ಮಹತ್ವದ ಅಂಶವೆಂದರೆ, ಪ್ರತಿಪಕ್ಷಗಳ ಒಕ್ಕೂಟದಲ್ಲಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ತನ್ನ ಬೆಂಬಲ ಎಂದು ಆಂತರಿಕವಾಗಿ ಹೇಳಿಕೊಂಡಿದೆ.

ಹೀಗಾಗಿ, ಸಿನ್ಹಾ ಅವರ ರಾಜ್ಯಗಳ ಪ್ರವಾಸ ಏನಿದ್ದರೂ ಔಪಚಾರಿಕವಷ್ಟೇ ಆಗುತ್ತಿದೆ. ಬಿಜೆಪಿಯಲ್ಲಿ ಇದ್ದಾಗ ಸಿನ್ಹಾ ಅವರು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು. ಅದರ ಪ್ರಭಾವ ಈಗ ಕಾಣುತ್ತಿದೆಯೇ ಎಂಬ ಭಾವನೆ ಈಗ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next